Advertisement

ರಣಜಿ ಸೆಮಿಯಲ್ಲಿ ಎದುರಾಳಿ ಬೆಂಗಾಲ್: ತಂಡದ ಬಲ ಹೆಚ್ಚಿಸಿದ ಕೆ.ಎಲ್. ರಾಹುಲ್

10:13 AM Feb 26, 2020 | keerthan |

ಬೆಂಗಳೂರು: ಜಮ್ಮು ಕಾಶ್ಮೀರ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಕರ್ನಾಟಕ ತಂಡ ರಣಜಿ ಸೆಮಿ ಫೈನಲ್ ನಲ್ಲಿ ಬಂಗಾಳ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ತಂಡವನ್ನು ಹೆಸರಿಸಿದ್ದು, ಕೆ.ಎಲ್. ರಾಹುಲ್ ತಂಡವನ್ನು ಕೂಡಿಕೊಂಡಿದ್ದು, ಬಲ ಹೆಚ್ಚಿಸಿದ್ದಾರೆ.

Advertisement

ಇದರಿಂದ ಸಹಜವಾಗಿಯೇ ರಾಜ್ಯ ತಂಡದ ಬಲ ಇಮ್ಮಡಿಗೊಂಡಿದೆ. ಕೆ.ಎಲ್‌.ರಾಹುಲ್‌ ತಂಡ ಕೂಡಿಕೊಂಡಿದ್ದರಿಂದ ಪವನ್‌ ದೇಶಪಾಂಡೆ ತಂಡದಿಂದ ಹೊರಬಿದ್ದಿದ್ದಾರೆ. ಇದೊಂದು ಸಣ್ಣ ಬದಲಾವಣೆಯಷ್ಟೇ. ಉಳಿದಂತೆ ಕ್ವಾರ್ಟರ್‌ಫೈನಲ್‌ನಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ. ಕರುಣ್‌ ನಾಯರ್‌ ತಂಡವನ್ನು ಯಥಾಪ್ರಕಾರ ನಾಯಕರಾಗಿ ಮುನ್ನಡೆಸಲಿದ್ದಾರೆ.

ಒಡಿಶಾ ವಿರುದ್ಧ ಮುನ್ನಡೆ ಸಾಧಿಸಿದ ಬಂಗಾಳ ತಂಡ ಸೆಮಿ ಫೈನಲ್ ಗೇರಿದ್ದು, ಕರ್ನಾಟಕ ವಿರುದ್ದ ಆಡಲಿದೆ. ಈ ಸೆಮಿಫೈನಲ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಫೆ. 29ರಂದು ಆರಂಭವಾಗಲಿದೆ.

ಕರ್ನಾಟಕ ತಂಡ: ಕರುಣ್‌ ನಾಯರ್‌ (ನಾಯಕ), ಆರ್‌.ಸಮರ್ಥ್, ದೇವದತ್ತ ಪಡಿಕ್ಕಲ್‌, ಮನೀಷ್‌ ಪಾಂಡೆ, ಕೆ.ಎಲ್‌.ರಾಹುಲ್‌, ಎಸ್‌.ಶರತ್‌, ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಕೆ.ವಿ.ಸಿದ್ಧಾರ್ಥ್, ಪ್ರಸಿದ್ಧ್ ಎಂ.ಕೃಷ್ಣ, ಜೆ.ಸುಚಿತ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಬಿ.ಆರ್‌.ಶರತ್‌.

Advertisement

Udayavani is now on Telegram. Click here to join our channel and stay updated with the latest news.

Next