Advertisement

ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಗೆ ಗುರುವಂದನೆ

11:31 AM Jul 31, 2018 | Team Udayavani |

ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗದ ಸಂಸ್ಥಾಪಕಾಧ್ಯಕ್ಷ, ಕಲಾ ಸಂಘಟಕ, ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಅವರ ಶಿಷ್ಯವೃಂದದವರು ಜು. 29ರಂದು ಪೂರ್ವಾಹ್ನ ಗುರುಪೂರ್ಣಿಮೆಯ ಅಂಗವಾಗಿ ಗುರುವಂದನೆ ಸಲ್ಲಿಸಿದರು.
ವಿಕ್ರೋಲಿ ಕನ್ನಡ ಸಂಘ ಸಂಚಾಲಕತ್ವದ ವೀಕೇಸ್‌ ಇಂಗ್ಲಿಷ್‌ ಹೈಸ್ಕೂಲ್‌ ಸಭಾಗೃಹದಲ್ಲಿ ನಡೆದ ಯಕ್ಷಗಾನ ತರಬೇತಿ ಸಂದರ್ಭದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಶಿಷ್ಯವೃಂದದವರು ಪುಷ್ಪಗುತ್ಛವನ್ನಿತ್ತು ಅವರಿಗೆ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು.

Advertisement

ಯಕ್ಷಗಾನ ತರಬೇತಿಯ ವಿದ್ಯಾರ್ಥಿಗಳು ಮತ್ತು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟÅ ಇದರ ಸದಸ್ಯರುಗಳಾದ ರಮೇಶ್‌ ಭಿರ್ತಿ, ಸಾ. ದಯಾ. ಅಶೋಕ್‌ ಪಕ್ಕಳ, ವಿಶ್ವನಾಥ ಅಮೀನ್‌ ನಿಡ್ಡೋಡಿ, ನಾಗೇಶ್‌ ಏಳಿಂಜೆ, ಜಯಂತ್‌ ಸುವರ್ಣ, ಕರುಣಾಕರ ಶೆಟ್ಟಿ, ಪ್ರೀತಮ್‌ ದೇವಾಡಿಗ, ದೀಪಾ ಪಾಲೆತ್ತಾಡಿ, ಗಣಪತಿ ಮೊಗವೀರ, ಹರೀಶ್‌ ಪೂಜಾರಿ, ಜಯರಾಮ್‌ ನಾಯಕ್‌ ಹಾಗೂ ಇತರ ವಿದ್ಯಾರ್ಥಿಗಳಾದ ಶ್ರೇಯಸ್‌ ಜೈನ್‌, ಶ್ರಾವ್ಯಾ ಜೈನ್‌, ತ್ರಿಷಾ ಎಸ್‌. ಶೆಟ್ಟಿ, 
ಲಾಸ್ಯಾ ಪೂಜಾರಿ, ವೈಷ್ಣವಿ ಶೆಟ್ಟಿ, ವೈಭವಿ ಶೆಟ್ಟಿ, ಪ್ರತೀಕ್ಷಾ ಶೆಟ್ಟಿ, ಜಯ್‌ ಶೆಟ್ಟಿ, ಪ್ರಥಮ್‌ ಶೆಟ್ಟಿ, ಹಾರ್ದಿಕ್‌ ಜೈನ್‌, ಸುಜಿತ್‌ ಜೈನ್‌, ಶ್ರುತಿ, ಅವಕಾಶ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next