Advertisement

ಧಾರವಾಡದಲ್ಲಿ 12ದಿನಕ್ಕೊಮ್ಮೆ ನೀರು!

11:32 AM May 17, 2019 | Suhan S |

ಧಾರವಾಡ: 24/7 ನೀರು ಪೂರೈಕೆ ಸೌಲಭ್ಯದ ದೇಶದ ಮೊದಲ ಮಹಾನಗರ ಎಂಬ ಹಣೆಪಟ್ಟಿ ಹೊತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅವಳಿ ನಗರದಲ್ಲಿಯೇ 10-12ದಿನಕ್ಕೊಮ್ಮೆ ನೀರು ನೀಡುತ್ತಿದ್ದು, ಕೆಲವೊಂದು ಹಳ್ಳಿಗಳಿಗೆ ಬೇಸಿಗೆ ಮೊದಲೇ ಟ್ಯಾಂಕರ್‌ ನೀರು ಆಸರೆಯಾಗಿದೆ.ಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ-ಧಾರವಾಡ

Advertisement

ಅವಳಿ ನಗರದ ವಿವಿಧ ವಾರ್ಡ್‌ಗಳಲ್ಲಿ 24/7 ನೀರು ಪೂರೈಕೆ ಯೋಜನೆ ಇದೆ. ಜಿಲ್ಲೆಯ ಕೆಲವೊಂದು ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಇನ್ನು ಕೆಲವು ಕಡೆ ಪ್ರಸ್ತಾವನೆ ಹಂತದಲ್ಲಿದೆ. ಹಳೇ ಹುಬ್ಬಳ್ಳಿಗೆ ಆಸರೆಯಾಗಿದ್ದ ನೀರಸಾಗರ ಕೆರೆ ಬತ್ತಿದೆ. ಮಲಪ್ರಭಾ ನದಿಯ ಜಲಾಯಶ ನೀರಿನ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.

ಮಲಪ್ರಭಾ ಜಲಾಶಯದಿಂದ ನೀರು ಪೂರೈಕೆ ಮೇಲೆಯೇ ಅವಳಿನಗರ, ಕೆಲವೊಂದು ಹಳ್ಳಿಗಳು ಅವಲಂಬನೆಯಾಗಿವೆ. ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ, ನೀರು ಪೂರೈಕೆಯಲ್ಲಿ ಸೋರಿಕೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದು, ಕುಡಿಯುವ ನೀರಿನ ಬವಣೆ ಹೆಚ್ಚುವಂತೆ ಮಾಡಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಇದು ಇನ್ನಷ್ಟು ಹೆಚ್ಚುತ್ತಿದೆ.

ಮಲಪ್ರಭಾ ನದಿ ಜಲಾಶಯದಿಂದ ಸಗಟು ನೀರು ಪೂರೈಕೆಗೆ ಮತ್ತೂಂದು ಪೈಪ್‌ಲೈನ್‌ ಹಾಕಲು ಅಂದಾಜು 24 ಕೋಟಿ ರೂ.ಗಳ ಪ್ರಸ್ತಾವನೆ ಇದೆಯಾದರೂ ಪಾಲಿಕೆಯಿಂದಲೇ ಹಣ ಭರಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆಗೆ ಮೀನಮೇಷ ತೋರಿತ್ತು. ಈಗಲೂ ಯೋಜನೆ ಅತಂತ್ರ ಸ್ಥಿತಿಯಲ್ಲಿಯೇ ಉಳಿಯುವಂತಾಗಿದೆ.

ಒಂದು ಕಡೆ ಹಳೇ ಹುಬ್ಬಳ್ಳಿಗೆ ನೀರು ಪೂರೈಕೆಯ ನೀರಸಾಗರ ಕೆರೆ ಮಳೆ ಕೊರತೆಯಿಂದ ಬತ್ತಿ ಹೋಗಿದೆ. ಇನ್ನೊಂದು ಕಡೆ ಮಲಪ್ರಭಾ ನದಿ ಜಲಾಶಯ ಮೇಲಿನ ನೀರಿನ ಅವಲಂಬನೆ ಹೆಚ್ಚುತ್ತಿದೆ. ಮಹಾನಗರದಲ್ಲಿ ಹೊಸ ಬಡಾವಣೆಗಳು ಹೆಚ್ಚುತ್ತಲೇ ಸಾಗಿವೆ. ಕಳಸಾ-ಬಂಡೂರಿ ನಾಲಾ ಯೋಜನೆಯಿಂದ 5.6 ಟಿಎಂಸಿ ಆಡಿ ನೀರು, ಕಾಳಿ ನದಿ ಯೋಜನೆಯಿಂದ ನೀರು ಹೀಗೆ ಯೋಜನೆಗಳು ಕಾಗದಗಳಲ್ಲಿ ಮೊಳಗುತ್ತಿವೆಯಾದರೂ, ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಸಹಕಾರಿಯಂತೂ ಆಗುತ್ತಿಲ್ಲ.

Advertisement

ಖಾಸಗಿ ಕೊಳವೆ ಬಾವಿಗಳಿಂದಲೂ ನೀರು: ಜಿಲ್ಲೆಯಲ್ಲಿ 17 ಖಾಸಗಿ ಒಡೆತನದ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಅವುಗಳಿಂದಲೂ ನೀರು ಪೂರೈಸುವ ಕಾರ್ಯ ಸಾಗಿದೆ. ಧಾರವಾಡ ತಾಲೂಕಿನ ತಡಕೋಡ, ಹುಬ್ಬಳ್ಳಿ ತಾಲೂಕಿನ ಛಬ್ಬಿ, ನೂಲ್ವಿ, ಅಂಚಟಗೇರಿ, ಅಗಡಿ, ಸುಳ್ಳ, ಕಲಘಟಗಿ ತಾಲೂಕಿನ ಮುಕ್ಕಲ್, ಕಂಪ್ಲಿ, ಅರಳಿಹೊಂಡ, ಹಟಕಿನಾಳ, ಕುಂದಗೋಳದ ಹಿರೇಗುಂಜಾಳದ ಖಾಸಗಿ ಒಡೆತನದ ಕೊಳವೆ ಬಾವಿಗಳು ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ತಮ್ಮದೇ ಸೇವೆ ನೀಡುತ್ತಿವೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ನೀರಿನ ಬವಣೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಖಾಸಗಿ ಬೋರವೆಲ್ಗಳನ್ನೂ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಇದಲ್ಲದೇ ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳು ಕಾರ್ಯ ನಿರ್ವಹಿಸುತ್ತಿದ್ದು, ನೀರಿನ ಕುರಿತಂತೆ ದೂರು ಬಂದ ತಕ್ಷಣವೇ ಸ್ಪಂದನೆ ನೀಡಲಾಗುತ್ತಿದೆ.
-ರಾಜಶೇಖರ ಮುನವಳ್ಳಿ, ಕಾರ್ಯ ನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ಧಾರವಾಡ
ಕೊಳವೆ ಬಾವಿಗಳೇ ಆಧಾರ:

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 338 ಹಳ್ಳಿಗಳಿದ್ದು, 2 ಸಾವಿರಕ್ಕೂ ಅಧಿಕ ಕೊಳವೆ ಬಾವಿಗಳಿವೆ. 72 ಹಳ್ಳಿಗಳಿಗೆ ಮಲಪ್ರಭಾ ನೀರು ಪೂರೈಕೆ ಇದ್ದರೆ ಉಳಿದ 316 ಗ್ರಾಮಗಳಿಗೆ ಕೊಳವೆ ಬಾವಿಗಳೇ ಆಧಾರ. ಈ ಪೈಕಿ ಕೆಲವೊಂದಿಷ್ಟು ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಇದ್ದರೆ ಕೆಲವೊಂದಿಷ್ಟು ಕೊಳವೆ ಬಾವಿ ಸ್ಥಗಿತಗೊಂಡಿವೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ 5 ಕೋಟಿ ರೂ. ಹಣ ನೀಡಿದೆ. ನೀರಿನ ಕೊರತೆ ನೀಗಿಸಲು 75 ಹೊಸ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.
.ಶಶಿಧರ ಬುದ್ನಿ
Advertisement

Udayavani is now on Telegram. Click here to join our channel and stay updated with the latest news.

Next