Advertisement

ಟಿ-20 ಟಾಸ್‌ ವಿವಾದ ಐಸಿಸಿಗೆ ಲಂಕಾ ದೂರು

07:00 AM Sep 09, 2017 | |

ಕೊಲಂಬೊ: ಬುಧವಾರದ ಏಕೈಕ ಟಿ-20 ಪಂದ್ಯದ ವೇಳೆ ಟಾಸ್‌ ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ವಿರುದ್ಧ ಐಸಿಸಿಗೆ ದೂರು ಸಲ್ಲಿಸಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ನಿರ್ಧರಿಸಿದೆ.

Advertisement

ಭಾರತ-ಶ್ರೀಲಂಕಾ ನಡುವಿನ ಈ ಪಂದ್ಯದ ಟಾಸ್‌ ಮಳೆಯಿಂದ ವಿಳಂಬಗೊಂಡಿತ್ತು. ಬಳಿಕ ಇತ್ತಂಡಗಳ ನಾಯಕರಾದ ವಿರಾಟ್‌ ಕೊಹ್ಲಿ, ಉಪುಲ್‌ ತರಂಗ, ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಮತ್ತು ಟಿವಿ ಕಮೆಂಟೇಟರ್‌ ಆಗಿದ್ದ ಭಾರತದ ಮಾಜಿ ಆಟಗಾರ ಮುರಳಿ ಕಾರ್ತಿಕ್‌ ಟಾಸ್‌ ಹಾರಿಸಲು ಮೈದಾನಕ್ಕೆ ಇಳಿದಿದ್ದರು.ನಾಣ್ಯ ಚಿಮ್ಮಿಸಿದ್ದು ಉಪುಲ್‌ ತರಂಗ. ಆಗ ಕೊಹ್ಲಿ “ಹೆಡ್ಸ್‌” ಎಂದು ಕೂಗಿದರು. ಬಿದ್ದದ್ದು “ಟೈಲ್ಸ್‌’. ಎಡವಟ್ಟು ಸಂಭವಿಸಿದ್ದು ಇಲ್ಲಿಯೇ. “ಟೈಲ್ಸ್‌… ಭಾರತ ಟಾಸ್‌ ಗೆದ್ದಿದೆ’ ಎಂದು ಪೈಕ್ರಾಫ್ಟ್ ಹೇಳಿಬಿಟ್ಟರು!

ಪೈಕ್ರಾಫ್ಟ್ ತಮ್ಮ ತಪ್ಪನ್ನು ಅಲ್ಲಿಯೇ ತಿದ್ದಿಕೊಳ್ಳಬಹುದಿತ್ತು. ಆದರೆ ಮುರಳಿ ಕಾರ್ತಿಕ್‌ ಇದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಕೂಡಲೇ ಅವರು “ಟಾಸ್‌ ಗೆದ್ದ’ ವಿರಾಟ್‌ ಕೊಹ್ಲಿ ಜತೆ ಮಾತುಕತೆ ಆರಂಭಿಸಿ ಆಗಿತ್ತು.

ಕೊಹ್ಲಿ ಮೊದಲು ಬೌಲಿಂಗ್‌ ನಡೆಸಲು ನಿರ್ಧರಿಸಿದರು. ಬಳಿಕ ಉಪುಲ್‌ ತರಂಗ ಕೂಡ ಮೊದಲು ಬೌಲಿಂಗ್‌ ನಡೆಸುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಆಗ ಭಾರತ ಮೊದಲು ಬ್ಯಾಟಿಂಗ್‌ ನಡೆಸುತ್ತಿತ್ತು; ಪಂದ್ಯದ ಫ‌ಲಿತಾಂಶ ಬೇರೆ ಆಗಲೂಬಹುದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next