Advertisement

ಮೈತ್ರಿ ಅಭ್ಯರ್ಥಿ ಪ್ರಮೋದ್‌ ಉಡುಪಿಗೆ

09:44 PM Mar 23, 2019 | |

ಉಡುಪಿ: ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್‌ ಪಡೆದಿರುವ ಪ್ರಮೋದ್‌ ಮಧ್ವರಾಜ್‌ ಶುಕ್ರವಾರ ಉಡುಪಿಗೆ ಆಗಮಿಸಿದರು. 

Advertisement

ಮೊದಲು ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ ಪ್ರಮೋದ್‌, ಕಾಂಗ್ರೆಸ್‌- ಜೆಡಿಎಸ್‌ ಜೋಡಿ ಚಿಹ್ನೆಯ ಶಾಲು ಧರಿಸಿದ್ದರು. ಇಂತಹ ಶಾಲು ಈವರೆಗೆ ಯಾರೂ ತಯಾರಿಸಿಲ್ಲ. ಪಕ್ಷ, ಚಿಹ್ನೆ, ಬಗ್ಗೆ ಜನರ ಗೊಂದಲ ನಿವಾರಿಸಲು ಈ ಶಾಲನ್ನು ಎ.18ರ ವರೆಗೆ ತೊಟ್ಟಿರುತ್ತೇನೆ ಎಂದರು. 

ಉಡುಪಿಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಹಾಲು ಜೇನಿನಂತೆ ಬೆರೆಯಲಿದೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿ¨ªೆ. ಮೈತ್ರಿ ಧರ್ಮದಂತೆ ಜೆಡಿಎಸ್‌ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಪರವಾಗಿ ಸ್ಪರ್ಧಿಸಲಿ ದ್ದೇನೆ. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಇಂಥ ಅವಕಾಶ ಸಿಕ್ಕಿದೆ. ನನ್ನ ಮನೆಗೆ ಹೋಗುವ ಮೊದಲು ಕಾಂಗ್ರೆಸ್‌ ಕಚೇರಿಗೆ ಭೇಟಿ ಕೊಟ್ಟಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next