Advertisement

ಭತ್ತ ಕಟಾವು ಯಂತ್ರ ದುರಸ್ತಿ ಸಮಸ್ಯೆ ಪರಿಹರಿಸಲು ಆಗ್ರಹ

06:05 PM Apr 13, 2020 | Naveen |

ಕಂಪ್ಲಿ: ತಾಲೂಕಿನಲ್ಲಿ ಹಿಂಗಾರು ಹಂಗಾಮಿ ಭತ್ತದ ಕಟಾವು ನಿಧಾನವಾಗಿ ವೇಗ ಪಡೆಯುತ್ತಿದೆ. ಆದರೆ ಕಟಾವು ಯಂತ್ರಗಳ ಕೊರತೆ ಕಾಣುತ್ತಿದೆ. ಈ ಮೊದಲು ಭತ್ತದ ಕಟಾವಿಗೆ ನೆರೆಯ ಆಂಧ್ರದಿಂದ ಯಂತ್ರಗಳು ಆಗಮಿಸುತ್ತಿದ್ದವು. ಆದರೆ ಲಾಕ್‌ಡೌನ್‌ನಿಂದಾಗಿ ಅಂತಾರಾಜ್ಯ ಗಡಿ ಪ್ರದೇಶ ನಿಷೇಧಿಸಲಾಗಿರುವುದರಿಂದ ಹಾಗೂ ಸ್ಥಳೀಯ ಯಂತ್ರಗಳಿಗೆ ಬೇಡಿಕೆ ಬಂದಿದೆ. ಆದರೆ ಯಂತ್ರಗಳು ದುರಸ್ತಿಗೆ ಬಂದಿರುವುದರಿಂದ ದುರಸ್ತಿಗೆ ಸಂಬಂಧಿಸಿದ ಅಂಗಡಿಗಳು, ಗ್ಯಾರೇಜುಗಳು ತೆರೆಯದ ಕಾರಣ ರೈತರಿಗೆ ಸಮಸ್ಯೆ ಆಗಿರುವುದರ ಜೊತೆಗೆ ಯಂತ್ರಗಳ ಕೊರತೆಯನ್ನೇ ಆಧಾರವಾಗಿಟ್ಟುಕೊಂಡು ಸಿಕ್ಕಾಪಟ್ಟೆ ಬಾಡಿಗೆ ಹೆಚ್ಚಿಸಲಾಗಿದೆ. ಇದರಿಂದ ರೈತರು ಪರಿತಪಿಸುವಂತಾಗಿದೆ. ಜತೆಗೆ ಇಂಧನದ ಕೊರತೆಯೂ ಕಾಡುತ್ತಿದೆ.

Advertisement

ವರ್ಷದಲ್ಲಿ ನಾಲ್ಕರಿಂದ ಆರು ತಿಂಗಳ ಸೀಜನ್‌ ಇದ್ದು, ಈ ಅವದಿಯಲ್ಲಿಯೇ ಭತ್ತದ ಕಟಾವು ಯಂತ್ರಗಳನ್ನು ದುಡಿಸಿಕೊಳ್ಳಬೇಕಾಗಿದೆ. ಪ್ರತಿ ಗಂಟೆಗೆ 2300 ರೂ ನಂತೆ ತಿಂಗಳಿಗೆ 300 ಗಂಟೆ ಕಾರ್ಯನಿರ್ವಹಿಸಿದಲ್ಲಿ ಮಾಲೀಕನಿಗೆ ಸ್ವಲ್ಪ ಹಣ ಬರುತ್ತಿತ್ತು. ಸದ್ಯ ಕಂಪ್ಲಿ ತಾಲೂಕಿನಲ್ಲಿ ಗಂಟೆಗೆ 2500 ರೂ. ಬಾಡಿಗೆ ಇದೆ. ಆದರೆ ರೈತರಿಗೆ ಇದು ಹೊರೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಗಂಟೆಗೆ 2000 ರೂ. ನಿಗದಿಪಡಿಸುವಂತೆ ಶಾಸಕರಿಗೆ ಮನವಿ ಮಾಡಿದ್ದಾರೆ.

ಇನ್ನು ಕೃಷಿ ಇಲಾಖೆ ಯಂತ್ರಧಾರೆಯಲ್ಲಿ ಕೇವಲ ಒಂದು ಕಟಾವು ಯಂತ್ರವಿದ್ದು, ಗಂಟೆಗೆ 2ಸಾವಿರ ಬಾಡಿಗೆಗೆ ನೀಡಲಾಗುತ್ತಿದ್ದು, ಸಣ್ಣಪುಟ್ಟ ರೈತರು ಇದನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಎಲ್ಲರಿಗೂ ಇದು ಸಿಗುವಂತಿಲ್ಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next