Advertisement

ಕಾರ್ಯಕರ್ತರ ಉತ್ಸಾಹದಿಂದಲೇ ಗೆಲುವು

04:40 PM Oct 24, 2020 | Suhan S |

ಶಿರಾ: ವಿಜಯದಶಮಿ ಮುಗಿದ ನಂತರ ನ.2ರ ಸಂಜೆಯವರೆಗೆ ಒಂದು ವಾರ ಸತತವಾಗಿ ಪ್ರಚಾರ ನಡೆಸುವ ಮೂಲಕ ಜೆಡಿಎಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚುನಾವಣಾ ಪ್ರಚಾರ ಸಮಯ ಮುಗಿಯುವವರೆಗೆ ಶಿರಾದಲ್ಲಿದ್ದು ಪ್ರಚಾರ ನಡೆಸುವುದಾಗಿ ತಿಳಿಸಿ, 4 ವಿಧಾನಪರಿಷತ್‌ ರಾಜ ರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶತಾಯಗತಾಯ ಶ್ರಮಿಸುತ್ತೇವೆ ಎಂದರು.

ತುಮಕೂರು ಗ್ರಾಮಾಂತರದ ಶಾಸಕ ಗೌರಿಶಂಕರ್‌ ನೆಲಮಂಗಲ, ತಿ.ನರಸೀಪುರ ಕ್ಷೇತ್ರದಶಾಸಕರು ಸೇರಿದಂತೆ ಒಬ್ಬೊಬ್ಬರು ಒಂದೊಂದುನಿರ್ವಹಿಸುತ್ತಿರುತ್ತಾರೆ. ಶಾಸಕ ಸತ್ಯನಾರಾಯಣ ಅವರ ಹೆಣ್ಣುಮಕ್ಕಳು, ಅಳಿಯಂದಿರು ಸೇರಿದಂತೆ ಎಲ್ಲರೂ ದಿನಕ್ಕೊಂದು ಹಳ್ಳಿಗೆ ಹೋಗಿ ಪ್ರಚಾರ ನಡೆಸುವಂತೆ ಸಲಹೆ ಕೊಟ್ಟಿದ್ದೇನೆ. ಹದಿನೆಂಟು-ಇಪ್ಪತ್ತು ಸಮುದಾಯದ ಮುಖಂಡರು ನಮ್ಮಜೊತೆಗೆ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.

ಈ ಕ್ಷೇತ್ರ ಮೊದಲಿಂದಲೂ ಜೆಡಿಎಸ್‌ನದ್ದೇ  ಮೊದಲ ಬಾರಿ ನಾನು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 9 ಶಾಸಕರನ್ನು ನೀಡುವ ಮೂಲಕ ಪಕ್ಷಕ್ಕೆ ಶಕ್ತಿ ನೀಡಿದ್ದು ಈ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ಶಕ್ತಿ ಕುಂದಿಸಿ ಅವರ ಗೆಲುವಿಗೆ ನಮ್ಮ ಶಕ್ತಿಯನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪಕ್ಷದಲ್ಲೇ ಉಳಿದ ಮುಖಂಡರು ಕಾರ್ಯಕರ್ತರು ಅದನ್ನು ಎದುರಿಸಿ ಕೆಲಸ ಮಾಡುವ ಉತ್ಸಾಹ ತೋರಿಸುತ್ತಿದ್ದಾರೆ. ಕಳೆದೆರಡು ದಿನಗಳಲ್ಲಿ ಕಾರ್ ಕರ್ತರು ಉತ್ಸಾಹವನ್ನು ಗಮನಿಸಿದ್ದೇನೆ ಈ ಬಾರಿ ಗೆಲುವು ನಮ್ಮದೇ ನನಗೆ ವಿಶ್ವಾಸವಿದೆ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಜೊತೆ ಸರ್ಕಾರ ರಚಿಸಿದ ಸಂದರ್ಭದಲ್ಲಿ ಉಂಟಾಗಿದ್ದು ಜೆಡಿಎಸ್‌ಗೆ ಎಂದು ಒಪ್ಪಿಕೊಂಡ ಅವರು, ನಾನು ಯಾವುದನ್ನು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. ನಾನು ಹುಟ್ಟು ಹೋರಾಟಗಾರ ಎಲ್ಲವನ್ನು ಎದುರಿಸುವ ಶಕ್ತಿ ಇದೆ ಎಂದು ಸಮರ್ಥಿಸಿಕೊಂಡರು.

Advertisement

ಈ ಸಂದರ್ಭದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್‌, ಬೆಮೆಲ್‌ ಕಾಂತರಾಜು, ಮಾಜಿ ಶಾಸಕ ‌ ಸುರೇಶ್ ಬಾಬು, ಮಾಜಿ ಶಾಸಕ ವೈ.ಎಸ್‌.ಪಿ.ದತ ¤, ಕ್ಷೇತ್ರದ ಉಸ್ತುವಾರಿ ತಿಪ್ಪೇಸ್ವಾಮಿ, ತಿಮ್ಮರಾಯಪ್ಪ, ಆರ್‌. ರಾಘವೇಂದ್ರ ಇದ್ದರು.

ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯವಿಲ :

ಮಧುಗಿರಿ: ಜಿಲ್ಲೆಯಲ್ಲಿ ಶಿರಾ ಉಪ ಚುನಾವಣೆ ಕದನ ರಂಗೇರಿದ್ದು, ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡರೇ ಖುದ್ದು ಮೂರು ದಿನದಿಂದ ಅಖಾಡದಲ್ಲಿದ್ದಾರೆ. ಇಂಥ ವೇಳೆ ಜಿಲ್ಲೆಯ ಜೆಡಿಎಸ್‌

ಮುಖಂಡರಾದ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌, ಚಿಕ್ಕನಾಯ್ಕನಹಳ್ಳಿಯ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಹಾಗೂ ವಿಧಾನ ಪರಿಷತ್‌ ಸದಸ್ಯ ಬೆಮೆಲ್‌ ಕಾಂತರಾಜು ಚುನಾವಣೆ ಘೋಷಣೆಯಾಗಿದ್ದರೂಅಸಮಾಧಾನದ ಹೊಗೆಯಿಂದಾಗಿಇಲ್ಲಿಯವರೆಗೂ ಶಿರಾ ಕಡೆ ತಲೆ ಹಾಕಿರಲಿಲ್ಲ.ಆದರೆ ಯಾವಾಗ ಶಿರಾ ಚುನಾವಣೆಯನ್ನು ಗೌಡರು ಗಂಭೀರವಾಗಿ ಪರಿಗಣಿಸಿದರೋ ಮೂವರು ಮುಖಂಡರು ಗೌಡರ ಮುಂದೆ ಹಾಜರಾಗಿದ್ದಾರೆ. ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯನವರ ಮನೆಯು ಕ್ಷೇತ್ರದ ಡಿ.ಕೈಮರದಲ್ಲಿದ್ದು, ಶಿರಾಗೆ ಆನತಿ ದೂರದಲ್ಲಿದೆ. ಹಾಗಾಗಿ ಇಲ್ಲಿಯೇ ವಾಸ್ತವ್ಯ ಹೂಡಿರುವ ಗೌಡರು ಈ ಮೂವರು ಅತೃಪ್ತಜೆಡಿಎಸ್‌ ಮುಖಂಡರನ್ನು ಒಂದೆಡೆ ಸೇರಿಸಿದ್ದು, ಶಿರಾ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಿ ಅಸಮಾಧಾನ ಶಮನ ಮಾಡಿದ್ದಾರೆ. ಈ ಬಗ್ಗೆ ಉದಯವಾಣಿ ಜತೆ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಪಕ್ಷದಲ್ಲಿ ಅತೃಪ್ತರು ಯಾರೂ ಇಲ್ಲ. ಇವರೆಲ್ಲ ಪಕ್ಷದ ಆಸ್ತಿಯಂತಿದ್ದು, ಕೆಲವು ಕಹಿ ಘಟನೆಗಳಿಂದ ಚುನಾವಣೆಯ ಪ್ರಚಾರಕ್ಕೆ ಬಂದಿರಲಿಲ್ಲ. ಆದರೆ ಈಗ ಅಂತಹ ಯಾವುದೇ ಅಸಮಾಧಾನವೂ ಉಳಿದಿಲ್ಲ. ಹಾಗಾಗಿ ಎಲ್ಲರೂ ಒಟ್ಟಿಗೆ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದು, ಶಿರಾದಲ್ಲಿಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮನವರದ್ದೇ ಗೆಲುವು. ಈಗಾಗಲೇ ಪಕ್ಷದ ಎಲ್ಲ ನಾಯಕರು ಚುನಾವಣಾಪ್ರಚಾರಕ್ಕೆ ಆಗಮಿಸಿದ್ದು, ಶಿರಾದೆಲ್ಲೆಡೆ ಜೆಡಿಎಸ್‌ ಅಭ್ಯರ್ಥಿಗೆ ಅಭೂತಪೂರ್ವ ಗೆಲುವಿನ ಭರವಸೆ ಸಿಕ್ಕೆದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next