Advertisement

ಅಫ್ಜಲ್‌ ಗುರುವಿಗೆ ನಮಿಸುವರೇ?

10:14 AM Dec 09, 2017 | |

ಹೊಸದಿಲ್ಲಿ: “”ಭಾರತ ಮಾತೆಗೆ ನಮಿಸಲು ಆಗುವುದಿಲ್ಲ ಎಂದಾದರೆ ಅಫ್ಜಲ್‌ ಗುರುವಿಗೆ ನಮಸ್ಕಾರ ಮಾಡುವಿರಾ?”, ಇದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೆಲ ಸಂಸದರಿಗೆ ಕೇಳಿದ ಖಡಕ್‌ ಪ್ರಶ್ನೆ. 

Advertisement

ಪುಸ್ತಕ ಸಮಾರಂಭವೊಂದರಲ್ಲಿ ಭಾಗ ವಹಿ ಸಿದ್ದ ಅವರು, ಶಾಲೆಗಳಲ್ಲಿ ಜನಗಣ ಮನ ಬದಲಿಗೆ ವಂದೇ ಮಾತರಂ ಹಾಡಿಸುತ್ತಿರುವುದರ ವಿರುದ್ಧ ಕೆಲ ಸಂಸದರು ಇತ್ತೀಚೆಗೆ ದನಿಯೆತ್ತಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “”ವಂದೇ ಮಾತರಂ ಎನ್ನುವುದು ಭಾರತ ಮಾತೆಗೆ ನಾವು ಸಲ್ಲಿಸುವ ನಮನ. ಭಾರತ ಮಾತೆ ಎಂದರೆ, ಫೋಟೋಗಳಲ್ಲಿರುವ ಈ ಹೆಸರಿನ ದೇವತೆಯಲ್ಲ. 125 ಕೋಟಿ ಭಾರತೀಯರು ಗೌರವದಿಂದ ಸ್ಮರಿಸ ಬೇಕಾದ ತಾಯ್ನೆಲ. ಹೀಗಿರುವಾಗ ನಮ್ಮ ತಾಯಿಗೆ ನಾವು ವಂದಿಸಲು ಒಲ್ಲೆ ಎನ್ನುವ ನೀವು (ಸಂಸದರು) ಭಯೋತ್ಪಾದಕನಾದ ಅಫ್ಜಲ್‌ ಗುರುವಿಗೆ ನಮಸ್ಕರಿಸಲು ಬಯಸು ವಿರಾ?” ಎಂದು ಖಾರವಾಗಿ ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next