Advertisement

ಎಸ್‌ಸಿ/ಎಸ್‌ಟಿ ಮಸೂದೆಗೆ ವಿರೋಧ: ರಾಹುಲ್‌ಗೆ ಶಾ ತಿರುಗೇಟು

07:33 PM Aug 09, 2018 | Team Udayavani |

ಹೊಸದಿಲ್ಲಿ : ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಮಸೂದೆ ವಿಷಯದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆಗಿಳಿದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

“ರಾಹುಲ್‌ ಜೀ, ಸಂಸತ್‌ ಕಲಾಪ ಹಾಳುಗೆಡಹುವ ಮತ್ತು ಕಣ್ಣು ಹೊಡೆಯುವ ಕೆಲಸದಿಂದ ನಿಮಗೆ ವಿರಾಮ ಸಿಕ್ಕಿದಾಗೆಲ್ಲ ನೀವು ಸ್ವಲ್ಪ ಹೊತ್ತನ್ನು ಸತ್ಯಾಂಶ ತಿಳಿಯುವುದಕ್ಕೆ ಬಳಸಬೇಕು; ಎಸ್‌ಸಿ/ಎಸ್‌ಟಿ ಕಾಯಿದೆಗೆ ಬಲವಾದ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಈಗಾಗಲೇ ನಿರ್ಧರಿಸಿದೆ ಮತ್ತು ಸಂಸತ್ತಿನಲ್ಲಿ ಅದು ಪಾಸಾಗುವಂತೆ ನೋಡಿಕೊಂಡಿದೆ; ಹಾಗಿರುವಾಗ ನೀವು ಯಾತಕ್ಕಾಗಿ ಪ್ರತಿಭಟಿಸುತ್ತಿದ್ದೀರಿ ? ಎಂದು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ. 

“ರಾಹುಲ್‌ ಜೀ ನಿಮ್ಮಿಂದ ಸಂಶೋಧನೆ ಮತ್ತು ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದು ಕಷ್ಟ. ಆದರೆ ನೀವೊಮ್ಮೆ ಮಂಡಲ್‌ ವಿಷಯದಲ್ಲಿ ರಾಜೀವ್‌ ಗಾಂಧಿ ಮಾಡಿದ್ದ ಭಾಷಣವನ್ನು ಓದಬೇಕು;ಅವರದನ್ನು ಖಡಾಖಂಡಿತವಾಗಿ ಬಲವಾಗಿ  ವಿರೋಧಿಸಿದ್ದರು’ ಎಂದು ಅಮಿತ್‌ ಶಾ ನೆನಪಿಸಿಕೊಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next