Advertisement

ರಾಜ್ಯದಲ್ಲಿ ಜಲ ನೀತಿಗೆ ಸಮಿತಿ ರಚಿಸಲು ಸರಕಾರ ನಿರ್ಧಾರ

03:22 AM Jun 22, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ನೀರಿನ ಸದ್ಬಳಕೆ ಮಾಡಿಕೊಳ್ಳುವುದಕ್ಕಾಗಿ ಸೂಕ್ತ ಜಲ ನೀತಿ ರೂಪಿಸುವ ದೃಷ್ಟಿಯಿಂದ ಸಚಿವ ಸಂಪುಟದ ಉಪ ಸಮಿತಿ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ನೀರು ನಿರ್ವಹಣೆ, ಯಾವ ಉದ್ದೇಶಕ್ಕೆ ಹೆಚ್ಚಿನ ನೀರು ಬಳಕೆ ಮಾಡಬೇಕು, ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವ ಸಮಗ್ರ ನೀತಿ ರೂಪಿಸಲು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಪ ಸಮಿತಿಯಲ್ಲಿ ಯಾರು ಇರಬೇಕು, ಯಾರು ಅಧ್ಯಕ್ಷರಾಗಬೇಕು ಎನ್ನುವುದನ್ನು ಸಿಎಂ ನಿರ್ಧಾರಕ್ಕೆ ಬಿಡಲಾಗಿದೆ. ಈ ನೀತಿ ಅಂತಾರಾಜ್ಯ ಜಲ ವಿವಾದಕ್ಕೀಡಾದ ವಿಷಯಗಳನ್ನು ಒಳ ಗೊಳ್ಳುವುದಿಲ್ಲ. ವಿಶ್ವಬ್ಯಾಂಕ್‌ ನೆರವಿನಿಂದ ರಾಜ್ಯದ ಅಣೆಕಟ್ಟುಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ 2 ಮತ್ತು 3ನೇ ಹಂತದ ಕಾಮಗಾರಿಗಳಿಗೆ 1,500 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಈ ಯೋಜನೆಗೆ ಶೇ. 70ರಷ್ಟು ವಿಶ್ವ ಬ್ಯಾಂಕ್‌ ಸಾಲ ಮತ್ತು ಶೇ.30ರಷ್ಟು ರಾಜ್ಯದ ಪಾಲು ಬಳಸಲಾಗುವುದು ಎಂದರು.

ಡಿಪ್ಲೊಮಾ ಇನ್‌ ಅಗ್ರಿಕಲ್ಚರ್‌, ಬಿಎಸ್‌ಸಿ ಅಗ್ರಿ ಪ್ರವೇಶಕ್ಕೆ ರೈತರ ಮಕ್ಕಳಿಗೆ ಮೀಸಲಿರುವ ಪ್ರಮಾಣವನ್ನು ಶೇ. 40ರಿಂದ ಶೇ. 50ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next