Advertisement

New Delhi; ಬಂಗಲೆ ಖಾಲಿ ಮಾಡಿ: 200 ಮಾಜಿ ಸಂಸದರಿಗೆ ನೋಟಿಸ್‌

11:47 PM Jul 16, 2024 | Team Udayavani |

ಹೊಸದಿಲ್ಲಿ: 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ಸರಕಾರಿ ಬಂಗಲೆ ತೆರವುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ‌ ನೋಟಿಸ್‌ ನೀಡಿದೆ.

Advertisement

ಲೋಕಸಭೆ ಚುನಾವಣೆ ಮುಕ್ತಾಯವಾಗಿ ಹೊಸ ಸಂಸದರು ಆಯ್ಕೆಯಾಗಿದ್ದು, ಅವರಿಗೆ ನಿವಾಸಗಳನ್ನು ಕಲ್ಪಿಸಿ ಕೊಡಬೇಕಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ‌ ತಿಳಿಸಿದೆ.

ನಿಯಮಗಳ ಪ್ರಕಾರ, 18ನೇ ಲೋಕಸಭೆ ವಿಸರ್ಜನೆಯಾದ ತಿಂಗಳ ಒಳಗಾಗಿ ಮಾಜಿ ಸಂಸದರು ನಿವಾಸ ಖಾಲಿ ಮಾಡಬೇಕು. ಸಂಸದರು ನಿವಾಸ ಬಿಟ್ಟುಕೊಡದಿದ್ದರೆ ತೆರವು ಕಾರ್ಯಾಚರಣೆ ನಡೆಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next