Advertisement

Dr.Sudhakar: “ಬಾಂಬೆ ಬಾಯ್ಸ್‌ …’ ಸುಧಾಕರ್‌ ಸತ್ಯ ಹರಿಶ್ಚಂದ್ರರಾ?: ಪ್ರದೀಪ್‌ ಈಶ್ವರ್‌

01:53 AM Sep 04, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ನವರು ಸತ್ಯ ಹರಿಶ್ಚಂದ್ರರಲ್ಲ ಎಂಬ ಮಾಜಿ ಸಚಿವ ಡಾ| ಕೆ. ಸುಧಾಕರ್‌ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಪ್ರದೀಪ್‌ ಈಶ್ವರ್‌, 2013ರಲ್ಲಿ ನಮ್ಮ ಆಂಜಿನಪ್ಪಗೆ ಟಿಕೆಟ್‌ ತಪ್ಪಿಸಿ ಟಿಕೆಟ್‌ ತಂದಾಗ ಇವರು ಸತ್ಯ ಹರಿಶ್ಚಂದ್ರರಾಗಿದ್ದರಾ?’ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರ ಜತೆಗೆ ಮಾತನಾಡಿ, ಕುಮಾರಸ್ವಾಮಿ ಸರಕಾರ ಪತನಗೊಳಿಸುವಲ್ಲಿ ಸುಧಾಕರ್‌ ಪ್ರಮುಖ ಪಾತ್ರವಹಿಸಿದ್ದರು. ಅವತ್ತು ಬಾಂಬೆ ಬಾಯ್ಸ… ಆಗಿದ್ದವರು ಈಗ ಸತ್ಯ ಹರಿಶ್ಚಂದ್ರರಾ ? ಸುಧಾಕರ್‌ ಅವರೇ, ಕೋವಿಡ್‌ ಹಗರಣ ತನಿಖೆಗೆ ಸಮಿತಿ ಮಾಡಿ ಒಂದೂವರೆ ವರ್ಷವಾಗಿತ್ತು.

ವಿಳಂಬವಾಗುತ್ತಿದೆ ಎಂದು ಸರಕಾರದ ಮೇಲೆ ಒತ್ತಡ ಹಾಕಿದವರು ನಾವು. ಅವರು ಸಮಯಕ್ಕೆ ಸರಿಯಾಗಿ ವರದಿ ಕೊಟ್ಟಿದ್ದಾರೆ. ಯಾವತ್ತಾದರೂ ಒಂದು ದಿನ ನಿಮ್ಮ ಕೊರಳಿಗೆ ಬರುತ್ತದೆ ಎಂಬ ನಂಬಿಕೆ ನನಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next