Advertisement

ಇಬ್ಬರಿಗೆ ಮಂಗನ ಕಾಯಿಲೆ ಸೋಂಕು ತಗುಲಿರುವುದು ದೃಢ

07:24 AM Feb 04, 2019 | Team Udayavani |

ಎಚ್.ಡಿ.ಕೋಟೆ: ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮನಹೊಸಳ್ಳಿ ಹಾಡಿಯಲ್ಲಿ ಇಬ್ಬರಿಗೆ ಮಂಗನ ಕಾಯಿಲೆ ಸೋಂಕು ತಗುಲಿ ರುವುದು ಕಂಡು ಬಂದಿತ್ತು. ತಾಲೂಕಿನ ಆಸ್ಪತ್ರೆಯಲ್ಲಿ ಹಾಗೂ ಕೋಯಿಕ್ಕೋಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುರೇಶ್‌ ಮತ್ತು ಸುರೇಶಯ್ಯ ಅವರಿಗೆ ಮಂಗನ ಕಾಯಿಲೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.

Advertisement

ಇವರು ತಿಮ್ಮನಹೊಸಳ್ಳಿ ಹಾಡಿಯವರಲ್ಲ. ಇಬ್ಬರೂ ಮಾನಂದವಾಡಿ ತಾಲೂಕಿನ ಅಕ್ಕ ಪಕ್ಕದ ಗ್ರಾಮ ದವರು. ಇವರು ತಿಮ್ಮನಹೊಸಳ್ಳಿ ಹಾಡಿಯ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದರು. ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಾಡಿಗಳು ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಆದಿವಾಸಿ ಗಿರಿಜನರು ಕಾಡಿನಲ್ಲಿ ಅಡ್ಡಾಡುವಾಗ ಸಂಪೂರ್ಣ ಬಟ್ಟೆ ಧರಿಸಿರುವುದಿಲ್ಲ.

ಬಟ್ಟೆ ಧರಿಸದೇ ಇರುವ ಸಂದರ್ಭದಲ್ಲಿ ಕಾಡಿನಲ್ಲಿರುವ ಈ ಉಣ್ಣೆಗಳು ಮನುಷ್ಯನ ದೇಹ ಸೇರುತ್ತವೆ. ಹೀಗಾಗಿ ಮೈತುಂಬಾ ಬಟ್ಟೆಯನ್ನು ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕಾಯಿಲೆಯಿಂದ ದೂರ ಇರಲು ಹೇಗೆ ಇರಬೇಕು ಎನ್ನುವುದರ ಕುರಿತು ಆರೋಗ್ಯ ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ. ಒಂದು ವೇಳೆ ಉಣ್ಣೆ ಕಚ್ಚಿದರೆ, ಸೋಂಕು ತಗುಲದಂತೆ ಮೈಗೆ ಹಚ್ಚಿಕೊಳ್ಳುವ ಡಿಎಂಪಿ ಎಣ್ಣೆಯನ್ನು ಹಾಡಿಯ ನಿವಾಸಿಗಳಿಗೆ ವಿತರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next