Advertisement

ಪಠ್ಯಪುಸ್ತಕ ಮುದ್ರಕರ ಸಮಸ್ಯೆ ನಿವಾರಣೆ ಭರವಸೆ

11:07 AM Apr 14, 2017 | |

ಬೆಂಗಳೂರು: ಪಠ್ಯಪುಸ್ತಕ ಮುದ್ರಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಮತ್ತು ಶಾಲೆ ಆರಂಭಕ್ಕೂ ಪೂರ್ವದಲ್ಲೇ ಪಠ್ಯಪುಸ್ತಕವನ್ನು ಮುದ್ರಿಸಿಕೊಡುವಂತೆ ಮುದ್ರಕರ ಮನವೊಲಿಸಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇs… ಗುರುವಾರ ಪಠ್ಯಪುಸ್ತಕ ಮುದ್ರಕರ ಹಾಗೂ ಅಧಿಕಾರಿಗಳ ತುರ್ತು ಸಭೆ ನಡೆಸಿದರು.

Advertisement

ನಾನಾ ಕಾರಣಗಳಿಂದಾಗಿ ರಾಜ್ಯದಲ್ಲಿ ಪಠ್ಯಪುಸ್ತಕ ಮುದ್ರಣ ಸ್ಥಗಿತಗೊಂಡಿತ್ತು. ಹೀಗಾಗಿ, ಶಾಲೆ ಆರಂಭದ ನಂತರವೂ ಪಠ್ಯ ಪುಸ್ತಕ ಪೂರೈಕೆಯಾಗದೇ ಇದ್ದರೆ ಮಕ್ಕಳಿಗೆ ಸಮಸ್ಯೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ರಾಜ್ಯದ 30  ಮಂದಿ ಪಠ್ಯಪುಸ್ತಕ ಮುದ್ರಕರ ಸಮಸ್ಯೆ ಆಲಿಸಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮುದ್ರಕರು ತಾವು ಎದುರಿಸುತ್ತಿರುವ ಎಲ್ಲ ಸಮಸ್ಯೆಯನ್ನು ಸಚಿವರ ಮುಂದೆ ಹೇಳಿಕೊಂಡರು.

ಕಾಗದದ ಕೊರತೆ ನಿವಾರಣೆಗೆ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಕಾಗದ ಪೂರೈಕೆ ಮಾಡುವ ತೀರ್ಮಾನಕ್ಕೆ ಬರಲಾಯಿತು. ಕಾಗದ ಇಲ್ಲದೇ ಎರಡು ತಿಂಗಳು ಮುದ್ರಣ ವಿಳಂಬ ಆಗಿರುವುದರಿಂದ ದಂಡ ವಿಧಿಸದಂತೆ ಮುದ್ರಕರು ಮನವಿ ಮಾಡಿದರು. ಇದಕ್ಕೆ ಸಚಿವರು ಸ್ಪಂದಿಸಿದರು. ಹೀಗಾಗಿ, ಕಾಗದದ ವ್ಯವಸ್ಥೆ ಮಾಡಿದರೆ ಜೂನ್‌ 15ರೊಳಗೆ ಪಠ್ಯಪುಸ್ತಕ ಮುದ್ರಿಸಿ ನೀಡುವುದಾಗಿ ಮುದ್ರಕರು ಸಭೆಗೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next