Advertisement

ಬಿಎಸ್‌ಎಫ್ ಯೋಧರ ಹತ್ಯೆ ಹೊಣೆ ಹೊತ್ತ ದ ರೆಸಿಸ್ಟೆನ್ಸ್‌ ಫೋರ್ಸ್‌

03:39 AM May 22, 2020 | Hari Prasad |

ಶ್ರೀನಗರ: ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌-ಎ-ತಯ್ಯಬಾದ ಹೊಸ ರೂಪ ‘ದ ರೆಸಿಸ್ಟೆನ್ಸ್‌ ಫೋರ್ಸ್‌ (ಟಿಆರ್‌ಎಫ್) ಕರಾಳ ಹಸ್ತ ಚಾಚಲಾರಂಭಿಸಿದೆ.

Advertisement

ಶ್ರೀನಗರದ ಹೊರ ವಲಯದ ಸೌರಾ ಎಂಬ ಮಾರುಕಟ್ಟೆ ಪ್ರದೇಶದಲ್ಲಿ ರಮ್ಜಾನ್‌ ಉಪವಾಸ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಬ್ರೆಡ್‌ ಖರೀದಿ ಮಾಡುತ್ತಿದ್ದ ಬಿಎಸ್‌ಎಫ್ ನ ಇಬ್ಬರು ಯೋಧರನ್ನು ಟಿಆರ್‌ಎಫ್ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬುಧವಾರ ಸಂಜೆಯ ವೇಳೆಗೆ ಈ ಘಟನೆ ನಡೆದಿದೆ.

ಹುತಾತ್ಮರಾದ ಯೋಧರನ್ನು ಪಶ್ಚಿಮ ಬಂಗಾಳದ ಮುರ್ಶಿರಾಬಾದ್‌ ಜಿಲ್ಲೆಯ ಜಿಯಾ-ಉಲ್‌-ಹಕ್‌ (34) ಮತ್ತು ರಾಣಾ ಮಂಡಲ್‌ (37) ಎಂದು ಗುರುತಿಸಲಾಗಿದೆ.

ಅವರಿಬ್ಬರೂ ಸ್ನೇಹಿತರಾಗಿದ್ದು, ಪಂಡಾಕ್‌ ಕ್ಯಾಂಪ್‌ನಲ್ಲಿರುವ ಬಿಎಸ್‌ಎಫ್ ನ 37ನೇ ಬೆಟಾಲಿಯನ್‌ನಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. 2019ರ ಆ.5ರಿಂದ ಅವರಿಬ್ಬರು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದರು. ಅವರಿಬ್ಬರು ಪೋಷಕರು, ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಪೊಲೀಸ್‌ ಹುತಾತ್ಮ: ಪುಲ್ವಾಮಾ ಜಿಲ್ಲೆಯ ಪೆರ್ಕೂ ಬ್ರಿಡ್ಜ್ ಸಮೀಪ ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ರ ಜಂಟಿ ಗಸ್ತು ಪಡೆಯ ಮೇಲೆ ಉಗ್ರರು ಗುಂಡು ಹಾರಿಸಿದ ಪರಿಣಾಮ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಮತ್ತೂಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮೂವರ ಸೆರೆ: ಭದ್ರತಾ ಪಡೆಗಳು ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ, ಉಗ್ರ ಸಂಘಟನೆಗೆ ಸೇರಿದ್ದ ಮೂವರನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಈ ಮೂವರು ಲಷ್ಕರ್‌ ಇ-ತಯ್ಯಬಾ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದರು. ಕುಪ್ವಾರಾ ಜಿಲ್ಲೆಯ ಸೋಂಗಮ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಇವರು ಸೆರೆ ಸಿಕ್ಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next