Advertisement

ಸಂಚಾರಿ ಠಾಣೆ ಮುಖ್ಯ ಪೇದೆ ಕೋಟ್ಯಧಿಪತಿ

03:45 AM Feb 04, 2017 | Team Udayavani |

ಕಲಬುರಗಿ: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ದೂರಿನ ಹಿನ್ನೆಲೆಯಲ್ಲಿ ಇಲ್ಲಿನ ಸಂಚಾರಿ ಠಾಣೆಯ ಮುಖ್ಯ ಪೇದೆ ಕನಕರಡ್ಡಿ ಯಾದವ ಅವರ ನ್ಯೂ ರಾಘವೇಂದ್ರ ಕಾಲನಿಯ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಶುಕ್ರವಾರ ದಾಳಿ ಮಾಡಿದೆ. 

Advertisement

ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ, ಚಿನ್ನಾಭರಣ, ನಿವೇಶನ ಪತ್ರಗಳು, 2 ಟಿಪ್ಪರ್‌ಗಳು ಸಿಕ್ಕಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ನ್ಯೂ ರಾಘವೇಂದ್ರ ಕಾಲನಿಯಲ್ಲಿ ಭವ್ಯ ಬಂಗಲೆ, ಗಂಗಾನಗರದಲ್ಲಿ ನಿವೇಶನ, 11.39 ಲಕ್ಷ ರೂ. ನಗದು, 250 ಗ್ರಾಂ ಬಂಗಾರ ಪತ್ತೆಯಾಗಿದ್ದು, ದಾಳಿ ಶುಕ್ರವಾರ ರಾತ್ರಿವರೆಗೂ ಮುಂದುವರಿದಿತ್ತು. ಈ ವೇಳೆ ಕನಕರಡ್ಡಿ ಮನೆಯಲ್ಲಿರಲಿಲ್ಲ. ಅವರು ಮನೆಗೆ ಬಂದ ಮೇಲೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಎಸಿಬಿ ಮೂಲಗಳು ಸ್ಪಷ್ಟಪಡಿಸಿವೆ. ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next