Advertisement

ಬೆಳಕಿನೆಡೆಗೆ ಕೊಂಡೊಯ್ಯುವುದೇ ಆಧ್ಯಾತ್ಮ: ಚನ್ನಬಸವ ಶ್ರೀ

11:16 AM Aug 04, 2018 | Team Udayavani |

ಜೇವರ್ಗಿ: ಮನುಷ್ಯನಿಗೆ ಆವರಿಸಿರುವ ಅಜ್ಞಾನ ತೊಡೆದು ಹಾಕಿ ಜ್ಞಾನ ಬೆಳಕಿನಡೆಗೆ ಕೊಂಡೊಯ್ಯುವುದೇ ಆಧ್ಯಾತ್ಮ
ವಿದ್ಯೆ ಎಂದು ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಸೊನ್ನ ಗ್ರಾಮದ ಶಿವಾನಂದ ಶಿವಯೋಗಿ ಗ್ರಾಮೀಣ ಜನ ಕಲ್ಯಾಣ ಸಂಸ್ಥೆಯ ಗುರುಲಿಂಗಪ್ಪ ಶರಣರು ಸ್ವತಂತ್ರ ಪದವಿ ಪೂರ್ವ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.

ವಿದ್ಯೆಗಳಲ್ಲಿಯೇ ಆಧ್ಯಾತ್ಮ ವಿದ್ಯೆ ಮೇಲು, ಧರ್ಮವಿಲ್ಲದ ವಿಜ್ಞಾನ ಕುರುಡು-ವಿಜ್ಞಾನವಿಲ್ಲದ ಧರ್ಮ ಕುಂಟು. ಎಲ್ಲರನ್ನೂ ಸಮಾನವಾಗಿ ಕಾಣುವುದೇ ನಿಜವಾದ ಸನ್ಯಾಸ, ಪರರ ಹಿತವೇ ನಿಜವಾದ ಧರ್ಮವಾಗಿದೆ ಎಂದು ಹೇಳಿದರು.

ಬೆಂಗಳೂರಿನ ಪಿಯು ಕಾಲೇಜು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿ, ರಾಜ್ಯದಲ್ಲಿ
ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ದಕ್ಷಿಣ ಕರ್ನಾಟಕ ಭಾಗದ ಮಠ-ಮಂದಿರಗಳಿಗೆ ಅನುದಾನ ನೀಡುತ್ತಾರೆ. ಆದರೆ ಸರ್ಕಾರದ ಯಾವುದೇ ಸೌಲಭ್ಯ, ಅನುದಾನ ಪಡೆಯದೇ ಹೈದ್ರಾಬಾದ-ಕರ್ನಾಟಕ ಭಾಗದಲ್ಲಿ ಸೊನ್ನ ಮಠದ ಶಿಕ್ಷಣ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಸೊನ್ನ ವಿರಕ್ತ ಮಠದ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ಮತ್ತು ಕಾಲೇಜಿನ ಪ್ರಾಚಾರ್ಯ ಸದಾನಂದ ಪಾಟೀಲ
ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಡಿ.ಬಿ. ರಾಠೊಡ, ಬಾವಾ ಪಟೇಲ, ಗಿರೀಶ ರಾಠೊಡ, ಜಿ.ಎಸ್‌.ಪಾಟೀಲ,
ನಿಜಲಿಂಗ ದೊಡ್ಮನಿ, ಸಿ.ವಿ. ದೇಶಪಾಂಡೆ, ಗುರು ಹಿರೇಮಠ, ಅನಿಕೇತ ಗಾನೂರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next