Advertisement

Ayudha Pooje: ಬಸ್‌, ಯಂತ್ರೋಪಕರಣ ಪೂಜೆಗೆ 250 ರೂ.: ಕೆಎಸ್‌ಆರ್‌ಟಿಸಿ

04:39 AM Oct 10, 2024 | Team Udayavani |

ಬೆಂಗಳೂರು: ಬಸ್‌ ಮತ್ತು ಯಂತ್ರೋಪಕರಣಗಳ ಆಯುಧ ಪೂಜೆ ಆಚರಣೆಗೆ ನೀಡಲಾಗುವ ಹಣವನ್ನು ಒಂದೂವರೆಪಟ್ಟು ಹೆಚ್ಚಳ ಮಾಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಪ್ರತಿ ಬಸ್‌ನ ಪೂಜಾ ಕಾರ್ಯಕ್ಕೆ 250 ರೂ. ನೀಡಲು ನಿರ್ಧರಿಸಿದೆ.

Advertisement

ಪ್ರತಿ ಬಸ್‌ನ ಪೂಜಾ ಕಾರ್ಯಕ್ಕೆ ಈ ಮೊದಲು 100 ರೂ. ನೀಡಲಾಗುತ್ತಿತ್ತು. ಈಗ ಅದನ್ನು 250 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದರಂತೆ ಮುಂಗಡ ಹಣ ಪಡೆದು ಸ್ವತ್ಛತೆಯೊಂದಿಗೆ ಪೂಜಾ ಕಾರ್ಯಗಳನ್ನು ನೆರವೇರಿಸುವಂತೆ ಸೂಚಿಸಲಾಗಿದೆ. ಪ್ರತಿ ಘಟಕದಲ್ಲಿ ತಲಾ 100ರಿಂದ 500 ಬಸ್‌ಗಳಿರುತ್ತವೆ. 2008ರ ವರೆಗೆ 10 ರೂ. ನೀಡಲಾಗುತ್ತಿತ್ತು. 2009ರಲ್ಲಿ 30 ರೂ.ಗಳಿಗೆ ಹೆಚ್ಚಿಸಲಾಯಿತು.

2016ರಲ್ಲಿ 50 ರೂ. ಹಾಗೂ 2017ರಿಂದ ಈಚೆಗೆ 100 ರೂ. ನೀಡಲಾಗುತ್ತಿತ್ತು. ಡಿಪೋದಲ್ಲಿ ಆಯುಧ ಪೂಜೆ ನಡೆಸುವ ಸಂಪ್ರದಾಯ ಹಿಂದಿನಿಂದಲೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next