Advertisement

ಸಿಂಧನೂರಿನಲ್ಲಿ ಯುವಕನಿಂದ ಮಜ್ಜಿಗೆ-ತಂಪು ನೀರು ವಿತರಣೆ

06:28 PM May 02, 2020 | Naveen |

ಸಿಂಧನೂರು: ಕೋವಿಡ್ ಸೋಂಕು ನಿವಾರಿಸಲು ಹಗಲಿರುಳು ಕರ್ತವ್ಯದಲ್ಲಿ ನಿರತರಾದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗರದ ಯುವಕನೊಬ್ಬ ಉಚಿತವಾಗಿ ಮಜ್ಜಿಗೆ ಹಾಗೂ ತಂಪಾದ ನೀರು ಒದಗಿಸುತ್ತಿದ್ದಾನೆ. ವಿಜಯ ಪರಿಯಾನಿ ಎಂಬ ಯುವಕ ನಗರದಲ್ಲಿ ಇಲೆಕ್ಟ್ರಿಕಲ್‌ ಅಂಗಡಿ ಇಟ್ಟುಕೊಂಡು ಕಳೆದ ಒಂದೂವರೆ ತಿಂಗಳಿನಿಂದ ಸಾಮಾಜಿಕ ಸೇವೆ ಮಾಡುತ್ತಿದ್ದಾನೆ.

Advertisement

ಇದೀಗಕೋವಿಡ್ ಲಾಕ್‌ಡೌನ್‌ನಿಂದ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಅಧಿಕಾರಿಗಳು, ವೈದ್ಯರು, ಪೌರಕಾರ್ಮಿಕರು ಸೇರಿದಂತೆ ಅನೇಕ ಬಡ ಕಾರ್ಮಿಕರಿಗೆ ನಿತ್ಯ ಮಜ್ಜಿಗೆ ಹಾಗೂ ತಂಪಾದ ನೀರು ವಿತರಿ ಸುವ ಮೂಲಕ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದಾನೆ. ಬೈಕ್‌ನಲ್ಲಿ ಹುಡುಕಿಕೊಂಡು ಕರ್ತವ್ಯ ನಿರತರಿಗೆ ನಿತ್ಯ 4 ಲೀಟರ್‌ ಮಜ್ಜಿಗೆ ಹಾಗೂ ತಂಪಾದ ನೀರು ವಿತರಿಸಿ ಅವರ ದಣಿವು ನಿವಾರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next