Advertisement

ಮೈಸೂರು ರಾಜ ವಂಶಸ್ಥರ ಬೆಂಬಲ ಕೋರಿದ ಶಾ

06:30 AM Mar 31, 2018 | Team Udayavani |

ಮೈಸೂರು: ಈ ಚುನಾವಣೆಯಲ್ಲಿ ನೀವು ಪಕ್ಷವನ್ನು ಬೆಂಬಲಿಸಿ, ಮುಂದೆ ನಿಮ್ಮನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುತ್ತೇವೆ ಎಂದು ಶಾ, ಮೈಸೂರು ರಾಜವಂಶಸ್ಥರಿಗೆ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ. 

Advertisement

ಶುಕ್ರವಾರ ಮೈಸೂರು ಅರಮನೆಗೆ ಭೇಟಿ ನೀಡಿದ ಅಮಿತ್‌ ಶಾ, ರಾಜವಂಶಸ್ಥರ ಖಾಸಗಿ ನಿವಾಸದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದರು.

ಇದೇ ಮೊದಲ ಬಾರಿಗೆ ಅರಮನೆಗೆ ಭೇಟಿ ನೀಡಿದ ಅಮಿತ್‌ ಶಾಗೆ ರಾಜ ಪರಿವಾರದವರು ಮೈಸೂರು ಪೇಟಾ ತೊಡಿಸಿ, ಕಮಲ ನೀಡಿ ಬರಮಾಡಿಕೊಂಡರು. ನಂತರ,ಖಾಸಗಿ ನಿವಾಸದಲ್ಲಿ ಪ್ರಮೋದಾ ದೇವಿ ಅವರು ಪುಷ್ಪ ಗುತ್ಛ ನೀಡಿ ಅಮಿತ್‌ ಶಾರನ್ನು ಸ್ವಾಗತಿಸಿದರು. ಕೇಂದ್ರ ಸಚಿವ ಅನಂತಕುಮಾರ್‌, ಯಡಿಯೂರಪ್ಪ, ಪ್ರತಾಪ್‌ ಸಿಂಹ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next