Advertisement

ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

11:48 AM Jan 07, 2022 | Team Udayavani |

ಸೇಡಂ: ಕಿರಾಣಿ ಅಂಗಡಿ, ಹೋಟೆಲ್‌, ಪಾನ್‌ಶಾಪ್‌ಗ್ಳಲ್ಲಿ ಅಕ್ರಮ ಮದ್ಯ ಮಾರಾಟ ನಡೆದಿದ್ದು, ಕೂಡಲೇ ಸ್ಥಗಿತಗೊಳಿಸಬೇಕು ಇಲ್ಲದಿದ್ದರೆ ನಮ್ಮ ಮಾಂಗಲ್ಯವನ್ನೇ ನ್ಯಾಯಾಲಯಕ್ಕೆ ಕಟ್ಟುತ್ತೇವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ಭೀಮನಗರ ಹೂಡಾದ ಮಹಿಳೆಯರು ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಬಕಾರಿ ಕಚೇರಿಗೆ ಆಗಮಿಸಿ, ಅಬಕಾರಿ ನಿರೀಕ್ಷಕ ರವಿಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಗ್ರಾಮದ ಮಹಿಳೆ ಅಂಬವ್ವ, ಗ್ರಾಮದ ಎಲ್ಲೆಡೆ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆದಿದೆ. ಗ್ರಾಮದ ಯುವಕರು ಮದ್ಯಕ್ಕೆ ಮಾರು ಹೋಗಿ ಮನೆಗೆ ಬರುತ್ತಿಲ್ಲ. ಕೆಲ ಯುವಕರು ಈಗಾಗಲೇ ಮೃತಪಟ್ಟಿದ್ದಾರೆ. ಆದ್ದರಿಂದ ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಯಿರಿ ಎಂದು ಅಳಲು ತೋಡಿಕೊಂಡರು.

ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮೀಬಾಯಿ ಜಮಾದಾರ, ಮಲ್ಲಿಕಾರ್ಜುನ ವಡ್ಡೆರಾಜ, ಹಣಮಂತ ಇಟಗಿ, ಬಸಣ್ಣ ಜಮಾದಾರ, ಭೀಮಾಶಂಕರ ನಾಯಕ, ಭೀಮಣ್ಣ ವಿಕಾರಾಬಾದ, ಬೀರಪ್ಪ ಪೂಜಾರಿ, ಹಣಮಂತ ರಾಂಪೂರ, ರಹಿಮ್‌ ಜಮಾದಾರ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next