Advertisement

ಸುದೀಪ್‌ ದಂಪತಿ ವಿಚ್ಚೇದನ ಅರ್ಜಿ ವಿಚಾರಣೆ ಜೂನ್‌ 14ಕ್ಕೆ ಮುಂದೂಡಿಕೆ

11:31 AM Mar 10, 2017 | Harsha Rao |

ಬೆಂಗಳೂರು: ಚಿತ್ರನಟ ಸುದೀಪ್‌ ದಂಪತಿಯ ವಿವಾಹ ವಿಚ್ಚೇದನ ಪ್ರಕರಣ ಅಂತಿಮ ಹಂತ ತಲುಪಿದೆ. ಈ ಸಂಬಂಧ ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ, ಜೂನ್‌ 14ಕ್ಕೆ ವಿಚಾರಣೆಯನ್ನು ಮುಂದೂಡಿತು. ಮುಂದಿನ ವಿಚಾರಣೆ ವೇಳೆ ಸುದೀಪ್‌ ಹಾಗೂ ಅವರ ಪತ್ನಿ ಪ್ರಿಯಾ ಕಡ್ಡಾಯವಾಗಿ ಹಾಜರಿರಬೇಕು ಎಂದು
ನ್ಯಾಯಾಲಯ ಖಡಕ್‌ ಸೂಚನೆ ನೀಡಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ, ನ್ಯಾಯಾಲಯವೇ ತನಗಿರುವ ಸಂವಿಧಾನಬದ್ಧ ಅಧಿಕಾರ ಚಲಾಯಿಸಿ, ತೀರ್ಮಾನ ಕೈಗೊಳ್ಳಲಿದೆ ಎಂದು ಇಬ್ಬರ ಪರ ವಕೀಲರಿಗೂ ಸೂಚಿಸಿತು.

Advertisement

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಟ ಸುದೀಪ್‌ ದಂಪತಿ, ಪರಸ್ಪರ ವಿಚ್ಚೇದನ ಕೋರಿ 2015ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ನಡೆದ ಒಂದೂ ವಿಚಾರಣೆಗೆ ದಂಪತಿ ಹಾಜರಾಗದೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗಳನ್ನು ಮುಂದೂಡುತ್ತಲೇ ಬಂದಿದ್ದ ನ್ಯಾಯಾಲಯ, ಇದೀಗ
ಜೂನ್‌ 14 ರಂದು ತೀರ್ಪು ನೀಡಲಿದೆ. ಮತ್ತೂಂದೆಡೆ ಸುದೀಪ್‌ ಹಾಗೂ ಪ್ರಿಯಾ ಈಗಾಗಲೇ ಹಿರಿಯರ ಸಮ್ಮುಖದಲ್ಲಿ ಪರಸ್ಪರ ಒಂದಾಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next