Advertisement

ಕಪ್ಪೆಂದು ಹಳಿದಿದ್ದಕ್ಕೆ ಊಟದಲ್ಲಿ ವಿಷ ಬೆರಕೆ:5ಸಾವು!

06:00 AM Jun 24, 2018 | Team Udayavani |

ಮುಂಬಯಿ: ತನ್ನ ಚರ್ಮದ ಬಣ್ಣದಿಂದ ಸಂಬಂಧಿಕರಿಂದ ಸದಾ ನಿಂದನೆಗೆ ಗುರಿಯಾಗುತ್ತಿದ್ದ ಮಹಿಳೆಯೊಬ್ಬಳು, ಕುಟುಂಬದ ಎಲ್ಲರನ್ನೂ ಕೊಲ್ಲುವಂಥ ನಿರ್ಧಾರ ತೆಗೆದುಕೊಂಡು ಐವರ ಸಾವಿಗೆ ಕಾರಣಳಾಗಿದ್ದಾಳೆ.

Advertisement

ಮಹಾರಾಷ್ಟ್ರದ ಜ್ಯೋತಿ ಸರ್ವೇಸ್‌ ಎಂಬಾಕೆಯೇ ಈ ದುಷ್ಕೃತ್ಯ ಎಸಗಿದ ಮಹಿಳೆ. ತನ್ನನ್ನು ಕಪ್ಪು ಎಂದು ಹಾಗೂ ಅಡುಗೆ ಮಾಡಲು ಬಾರದವಳು ಎಂದು ದೂಷಿಸುತ್ತಿದ್ದ ಎಲ್ಲಾ ಸಂಬಂಧಿಕರನ್ನು ಕೊಲ್ಲಲು ನಿರ್ಧರಿಸಿದ ಈಕೆ, ಸಂಬಂಧಿಯೊಬ್ಬರ ಗೃಹ ಪ್ರವೇಶ ಸಮಾರಂಭದಲ್ಲಿ ತಯಾರಿಸಲಾಗಿದ್ದ ಅಡುಗೆಗೆ ಕೀಟನಾಶಕ ಬೆರೆಸಿದ್ದಳು. ಊಟ ಮಾಡುತ್ತಿದ್ದಂತೆ ನಾಲ್ವರು ಮಕ್ಕಳು, ಒಬ್ಬ ವ್ಯಕ್ತಿ ಮೃತ ಪಟ್ಟರೆ, 120ಕ್ಕೂ ಹೆಚ್ಚು ಅತಿಥಿಗಳು ಅಸ್ವಸ್ಥರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next