Advertisement

ಪಳ್ಳಿ: ಆಟಿಡೊಂಜಿ ಕೆಸರ್ದಗೊಬ್ಬು

06:55 AM Aug 02, 2017 | Harsha Rao |

ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಪಳ್ಳಿ ನಿಂಜೂರು ಇದರ ವತಿಯಿಂದ 27 ನೇ ವರ್ಷದ ಪೂರ್ವಭಾವಿಯಾಗಿ ಆಟಿಡೊಂಜಿ ಕೆಸರªಗೊಬ್ಬು ಕಾರ್ಯಕ್ರಮ ಪಳ್ಳಿ ಶ್ರೀ ಗೋಪಿನಾಥ ನಾಯಕ್‌ ಅವರ ಕೆಸರುಗದ್ದೆಯಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಸಂಗೀತಾ ನಾಯಕ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಯರಾಮ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಕಾಶ್‌ ಶೆಟ್ಟಿ, ಜಗದೀಶ್‌ ಹೆಗ್ಡೆ ,ಅಶೋಕ ಸಾಮಗ, ಆನಂದ ಪೂಜಾರಿ,ಭರತ್‌ ಹೆಗ್ಡೆ , ಚಂದ್ರಶೇಖರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

Advertisement

ಕೆಸರುಗದ್ದೆಯಲ್ಲಿ ವಿವಿಧ ರೀತಿಯ ಆಟೋಟಗಳು ನಡೆಯಿತು. ವಿಜೇತರಿಗೆ ಅಶೋಕ ಸಾಮಗ ಬಹುಮಾನ ವಿತರಿಸಿದರು. ಕಳೆದ ವರ್ಷದ ಅಧ್ಯಕ್ಷ ಗೌರಿಶ ಹಾಗೂ ಕಾರ್ಯದರ್ಶಿ ಶಂಕರ ಶೆಟ್ಟಿ ಉಪಸ್ಥಿತರಿದ್ದರು. ನಾಗಭೂಷಣ ಪಳ್ಳಿ ಕಾರ್ಯಕ್ರಮ ನಿರೂಪಿಸಿ, ಶ್ರೀಕಾಂತ ಪ್ರಭು ಸ್ವಾಗತಿಸಿ, ಚಂದ್ರಹಾಸ ಶೆಟ್ಟಿ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next