Advertisement

ದಾರಿಗಡ್ಡ ಬರುವವರನ್ನು ಇರಿಯುವ ಬಿಜೆಪಿ ಹುಚ್ಚ ಕೊಲೆಗಡುಕ: ಶಿವಸೇನೆ

03:21 PM May 25, 2018 | Team Udayavani |

ಮುಂಬಯಿ : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು ಶಿವಸೇನೆಯನ್ನು ದ್ರೋಹಿ ಎಂದು ಕರೆದ ಕೆಲವೇ ದಿನಗಳ ತರುವಾಯ ಕಟು ಪ್ರತಿಕ್ರಿಯೆ ನೀಡಿರುವ ಶಿವಸೇನೆ, ‘ಬಿಜೆಪಿಯು ದಾರಿಗಡ್ಡ ಬರುವ ಯಾರನ್ನೇ ಆದರೂ ಇರಿಯುವ ಹುಚ್ಚ ಕೊಲೆಗಡುಕ’ ಎಂದು ಕರೆದಿದೆ.

Advertisement

ಎರಡು ದಿನಗಳ ಹಿಂದೆ ಪಾಲ್‌ಘರ್‌ ಲೋಕಸಭಾ ಕ್ಷೇತ್ರದ ವಿರಾರ್‌ನಲ್ಲಿ ನಡೆದಿದ್ದ ಸಾರ್ವಜನಿಕ ರಾಲಿಯಲ್ಲಿ  ಮರಾಠಾ ದೊರೆ, ಯೋಧ, ಛತ್ರಪತ್ರಿ ಶಿವಾಜಿ ಅವರ ಪ್ರತಿಮೆಗೆ ಹಾರ ತೊಡಿಸುವ ತಮ್ಮ ಪಾದರಕ್ಷೆಯನ್ನು ತೆಗೆದಿರಿಸದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಸೇನೆ ಖಂಡಿಸಿತು. ಇದೇ ಮೇ 28ರಂದು ಪಾಲಘರ್‌ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. 

ಪಾಲಘರ ಲೋಕಸಭಾ ಚುನಾವಣೆಗೆ ದಿವಂಗತ ಸಂಸದ ಚಿಂತಾಮಣ್‌ ವನಾಗಾ ಅವರ ಪುತ್ರನನ್ನು ಕಣಕ್ಕಿಳಿಸಿಯುವ ಮೂಲಕ ಶಿವಸೇನೆ ಬಿಜೆಪಿಗೆ ದ್ರೋಹ ಬಗೆದಿದೆ ಎಂದು ಫ‌ಡ್ನವೀಸ್‌ ಈಚೆಗೆ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next