Advertisement

ವಯನಾಡಿನಲ್ಲಿ ನಕ್ಸಲ್‌ ಹತ್ಯೆ; ಚಾಮರಾಜನಗರದಲ್ಲಿ ಕಟ್ಟೆಚ್ಚರ 

02:44 PM Mar 07, 2019 | Team Udayavani |

ಚಾಮರಾಜನಗರ : ಕೇರಳದ ವಯನಾಡಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಬುಧವಾರ ರಾತ್ರಿ ಗುಂಡಿನ ಕಾಳಗದಲ್ಲಿ ನಕ್ಸಲನೊಬ್ಬನನ್ನು ಎನ್‌ಕೌಂಟರ್‌ ಮಾಡಲಾಗಿದ್ದು, ಆ ಹಿನ್ನಲೆಯಲ್ಲಿ ಗಡಿ ಪ್ರದೇಶವಾದ ಗುಂಡ್ಲುಪೇಟೆಯಲ್ಲಿ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿದೆ. 

Advertisement

ಚಾಮರಾಜನಗರದ ಗಡಿ ಪ್ರದೇಶ ಮೂಲೆಹೊಳೆ ಚೆಕ್‌ ಪೋಸ್ಟ್‌ನಲ್ಲಿ  ನಕ್ಸಲ್‌ ನಿಗ್ರಹ ಪಡೆ ಮತ್ತು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದಾರೆ.

ವೈಥಿರಿ ಎಂಬಲ್ಲಿ ರೆಸಾರ್ಟ್‌ಗೆ ಆಗಮಿಸಿದ ಐವರು ನಕ್ಸಲರು ಸಿಬಂದಿಗಳೊಂದಿಗೆ ಆಹಾರ ನೀಡುವಂತೆ ಜಗಳಕ್ಕಿಳಿದಿದ್ದಾರೆ. ಆ ಬಳಿಕ ಸ್ಥಳಕ್ಕಾಗಮಿಸಿದ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರು ಗುಂಡು ಹಾರಿಸಿ ಓರ್ವನನ್ನು ಹತ್ಯೆಗೈದಿದ್ದಾರೆ. 

ಹತ್ಯೆಗೀಡಾದ ನಕ್ಸಲ್‌ ಸಿ.ಪಿ.ಜಲೀಲ್‌ ಎನ್ನುವವನಾಗಿದ್ದು, ಬಂಧನಕ್ಕೊಳಗಾಗಿರುವ ಸಿ.ಪಿ.ಇಸ್ಮಾಯಿಲ್‌ ಸಹೋದರ. 2016ರಲ್ಲಿ ನಕ್ಸಲ್‌ ನಾಯಕ ಮುರಳಿ ಕನ್ನಂಬಳ್ಳಿ ಯೊಂದಿಗೆ ಇಸ್ಮಾಯಿಲ್‌ನನ್ನು ಪುಣೆಯಲ್ಲಿ ಬಂಧಿಸಲಾಗಿತ್ತು.ಇಸ್ಮಾಯಿಲ್‌ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next