Advertisement

ಮಂಗಳೂರು ಪೊಲೀಸ್ ಕಮೀಷನರ್ ಹರ್ಷ ವರ್ಗಾವಣೆ ; ವಿಕಾಸ್ ಕುಮಾರ್ ನೂತನ ಕಮೀಷನರ್

10:42 PM Jun 26, 2020 | Hari Prasad |

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ. ಪಿ ಎಸ್ ಹರ್ಷ IPS ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

Advertisement

ದೇಶದಾದ್ಯಂತ ಸುದ್ದಿಗೆ ಕಾರಣವಾಗಿದ್ದ ಮಂಗಳೂರು ಗೋಲಿಬಾರ್ ಪ್ರಕರಣ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣ ಇವರ ಅವಧಿಯಲ್ಲಿ ನಡೆದಿತ್ತು.

ಹರ್ಷ ಅವರನ್ನು ವಾರ್ತಾ ಮತ್ತು ಪ್ರಚಾರ ಇಲಾಖೆಯ ಡಿಐಜಿ ಮತ್ತು ಕಮೀಷನರ್ ಆಗಿ ನೇಮಿಸಲಾಗಿದೆ.

ಕಾರ್ಕಳ ಎ.ಎನ್.ಎಫ್.ನಲ್ಲಿ ಐಜಿಪಿಯಾಗಿದ್ದ ಬಿಹಾರ ಮೂಲದ ಐ.ಪಿ.ಎಸ್. ಅಧಿಕಾರಿ ವಿಕಾಸ್ ಕುಮಾರ್ ವಿಕಾಶ್ ಅವರನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ನೂತನ ಪೊಲೀಸ್ ಕಮೀಷನರ್ ಆಗಿ ನೇಮಕಗೊಳಿಸಲಾಗಿದೆ.


ಡಾ. ಹರ್ಷ ಅವರು ಮಂಗಳೂರಿನ ಖಡಕ್ ಕಮಿಷನರ್ ಎಂದೇ ಹೆಸರುವಾಸಿಯಾಗಿದ್ದರು. ಮತ್ತು ಜನಪರ ಕಮಿಷನರ್ ಎಂಬ ಹೆಸರನ್ನೂ ಅವರು ಗಳಿಸಿದ್ದರು.

ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದ ಡಾ. ಹರ್ಷ ಅವರು ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಕಮಿಷನರೇಟ್ ವ್ಯಾಪ್ತಿಯ ಜನರಿಗೆ ಕಾಲಕಾಲಕ್ಕೆ ನೀಡುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next