Advertisement

ಕೊನೆಗೂ “ಮಹಾ” ಖಾತೆ ಹಂಚಿಕೆ; ಶಿವಸೇನಾಕ್ಕೆ ಗೃಹ, ಎನ್ ಸಿಪಿಗೆ ಹಣಕಾಸು, ಕೈಗೆ ಕಂದಾಯ

09:51 AM Dec 13, 2019 | Team Udayavani |

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಿ ಎರಡು ವಾರಗಳ ನಂತರ ಶಿವಸೇನಾ-ಎನ್ ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಕೊನೆಗೂ ಖಾತೆಹಂಚಿಕೆಯನ್ನು ಅಂತಿಮಗೊಳಿಸಿದೆ.

Advertisement

ಯಾರಿಗೆ ಯಾವ ಖಾತೆ?

ಶಿವಸೇನಾದ ಏಕ್ ನಾಥ್ ಶಿಂಧೆಗೆ ಗೃಹ ಖಾತೆ, ನಗರಾಭಿವೃದ್ಧಿ, ಪರಿಸರ, ಲೋಕೋಪಯೋಗಿ, ಪ್ರವಾಸೋದ್ಯಮ, ಸಂಸದೀಯ ಖಾತೆ.

ಎನ್ ಸಿಪಿಯ ಚಗನ್ ಭುಜ್ ಬಲ್ ಗೆ ಗ್ರಾಮೀಣಾಭಿವೃದ್ಧಿ ಖಾತೆ, ಸಾಮಾಜಿಕ ನ್ಯಾಯ ಹಾಗೂ ರಾಜ್ಯ ಅಬಕಾರಿ ಖಾತೆ.

ಹಿರಿಯ ಕಾಂಗ್ರೆಸ್ ಮುಖಂಡ ಬಾಳಾಸಾಹೇಬ್ ಥೋರಟ್ ಗೆ ಕಂದಾಯ, ಶಿಕ್ಷಣ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಖಾತೆ.

Advertisement

ಎನ್ ಸಿಪಿಯ ಜಯಂತ್ ಪಾಟೀಲ್ ಗೆ ಹಣಕಾಸು, ವಸತಿ, ಆಹಾರ ಸರಬರಾಜು ಮತ್ತು ಕಾರ್ಮಿಕ ಖಾತೆ.

ಶಿವಸೇನಾದ ಸುಭಾಶ್ ದೇಸಾಯಿಗೆ ಕೈಗಾರಿಕೆ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಕ್ರೀಡೆ ಮತ್ತು ಯುವ, ಉದ್ಯೋಗ ಖಾತೆ.

ಕಾಂಗ್ರೆಸ್ ನ ನಿತಿನ್ ರಾವತ್ ಲೋಕೋಪಯೋಗಿ ಟ್ರಿಬ್ಯೂನಲ್ ಡೆವಲಪ್ ಮೆಂಟ್, ಹಿಂದುಳಿದ ವರ್ಗದ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ,  ಪರಿಹಾರ ಮತ್ತು ಪುನರ್ವಸತಿ ಖಾತೆ.

Advertisement

Udayavani is now on Telegram. Click here to join our channel and stay updated with the latest news.

Next