Advertisement

Lovers ಪರಾರಿ: ಯುವತಿಯ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ

09:22 PM Dec 18, 2023 | Team Udayavani |

ಗುಡಿಬಂಡೆ: (ಚಿಕ್ಕಬಳ್ಳಾಪುರ): ತಾಲೂಕಿನ ದಪ್ಪರ್ತಿ ಗ್ರಾಮದ ಒಂದೇ ಸಮುದಾಯಕ್ಕೆ ಸೇರಿದ ಯುವಕ ಯುವತಿ ಪ್ರೀತಿಸಿ ರಾತ್ರೋರಾತ್ರಿ ಗ್ರಾಮದಿಂದ ಪರಾರಿಯಾಗಿದ್ದು, ಇದರಿಂದ ಬೇಸತ್ತ ಹುಡುಗಿಯ ಕಡೆಯವರು, ಮನೆಯವರು ಯುವಕನ ತಂದೆ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

Advertisement

ದಪ್ಪರ್ತಿ ಗ್ರಾಮದ ಮನೋಜ್ ಮತ್ತು ಅಂಕಿತಾ ಇಬ್ಬರು ಪ್ರೀತಿಸುತ್ತಿದ್ದು, ಈ ಹಿಂದೆಯು ಸಹ ಇಬ್ಬರ ಮನೆಯಲ್ಲಿ ಗಲಾಟೆಗಳು ನಡೆದು ಅವರಿಬ್ಬರಿಗೂ ಬುದ್ದಿವಾದ ಹೇಳಿ, ಅವರವರ ಮನೆಯಲ್ಲಿ ವಾಸವಾಗಿದ್ದರು, ಆದರೆ ಅವರಿಬ್ಬರು ರಾತ್ರೋರಾತ್ರಿ ಗ್ರಾಮದಿಂದ ಓಡಿ ಓದ ಕಾರಣ ಯುವತಿಯ ಕಡೆಯ ಮನೆಯವರು ಹುಡುಗನ ತಂದೆ ಗಂಗರಾಜು, ತಾಯಿ ವೆಂಕಟಲಕ್ಷ್ಮಮ್ಮ ರವರುಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಗಲಾಟೆ ವಿಷಯ ತಿಳಿಯುತ್ತಿದ್ದಂತೆ ತುರ್ತು ಚಿಕಿತ್ಸಾ 108 ಆಂಬುಲೆನ್ಸ್ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಕ್ಕೆ ಆಗಮಿಸಿದ್ದರು. ಆದರೆ ಯುವತಿಯ ಕಡೆಯವರ ವಿರೋಧದಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಗ್ರಾಮದಲ್ಲೇ ಇರಬೇಕಾಗಿದ್ದ ಪರಿಸ್ಥಿತಿ ಬಂತು. ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಹತೋಟಿಗೆ ತಂದ ಮೇಲೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಗಾಯಾಳುಗಳು ಗುಡಿಬಂಡೆ ಸಾರ್ವಜನಿಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next