Advertisement

ರಾಮಮಂದಿರಕ್ಕೆ ಸಂಸತ್‌, ರಾಹುಲ್‌ ಬೆಂಬಲ ನೀಡಲಿ

11:14 PM May 31, 2019 | Lakshmi GovindaRaj |

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಂಸತ್‌ ಅನುಮೋದನೆ ನೀಡಬೇಕು. ಇದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬೆಂಬಲ ಕೊಡಬೇಕೆಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವಿದೆಯಾದರೂ ಸಂಸತ್ತೇ ಎಲ್ಲಕ್ಕಿಂತ ಮಿಗಿಲು. ಅಲ್ಲಿ ಪ್ರಧಾನಿ ಮೋದಿಯವರು ಇದಕ್ಕೆ ಅವಕಾಶ ಕೊಡಬೇಕು, ರಾಹುಲ್‌ ಗಾಂಧಿಯವರು ಬೆಂಬಲಿಸಬೇಕು ಎಂದರು.

ಬಿಜೆಪಿ ಗೆಲುವು ಏಕಾಯಿತು?: ಚುನಾವಣೆ ಕುರಿತು ಕೇಳಿದಾಗ, ಬೇರೆ ಪಕ್ಷಗಳು ಬಿಜೆಪಿಯನ್ನು ಕೋಮುವಾದಿ ಎಂದು ಬಿಂಬಿಸಲು ಯತ್ನಿಸಿದವು. ವಾಸ್ತವದಲ್ಲಿ ಎಲ್ಲ ಪಕ್ಷಗಳು ತಮ್ಮ ಯೋಜನೆ, ಅಭಿವೃದ್ಧಿ ಕುರಿತು ಚುನಾವಣೆ ಪ್ರಚಾರ ನಡೆಸಬೇಕಿತ್ತು.

ಇದರ ಬದಲು ನಿಂದೆ ಅತಿಯಾಯಿತು. ಧರ್ಮದ ವಿಚಾರವನ್ನು ಪ್ರಸ್ತಾವಿಸುವುದು ಬೇಡವಿತ್ತು. ಇದರಿಂದ ಹಿಂದುಗಳಲ್ಲಿ ಹಿಂದುತ್ವದ ಜಾಗೃತವಾಗಿ ಒಂದೇ ಪಕ್ಷ ಹೆಚ್ಚು ಸ್ಥಾನ ಗಳಿಸುವಂತಾಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next