Advertisement

Government ಉರುಳಿಸುವುದೇ ಕುಮಾರಸ್ವಾಮಿ ಕೆಲಸ: ಸಚಿವ ಚಲುವರಾಯಸ್ವಾಮಿ

12:17 AM Oct 22, 2024 | Team Udayavani |

ಮಂಡ್ಯ: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ರಾತ್ರಿ ಕನಸು ಬೀಳುತ್ತದೆ ಅಂತ ಕಾಣುತ್ತೆ. ಇರುವ ಸರಕಾರ ತೆಗೆಯಬೇಕು, ಮತ್ತೆ ಏನಾದರೂ ಮಾಡಬೇಕು ಎನ್ನುವುದೇ ಅವರ ಕೆಲಸವಾಗಿದೆ.

Advertisement

ಇದು, 2028ರವರೆಗೆ ರಾಜ್ಯ ಕಾಂಗ್ರೆಸ್‌ ಸರಕಾರ ಇರುವುದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ತಿರುಗೇಟು ನೀಡಿದ ಪರಿ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರಿಗಾದರೂ ಭವಿಷ್ಯ ಕೇಳಬೇಕಿದ್ದರೆ ಕುಮಾರಸ್ವಾಮಿ ಬಳಿ ಹೋಗುವುದಕ್ಕೆ ಹೇಳ್ಳೋಣ ಎಂದು ವ್ಯಂಗ್ಯವಾಡಿದರು. ಸರಕಾರ ರಚನೆ ಆದಾಗಿನಿಂದಲೂ ಈ ಸರಕಾರ ಇರಲ್ಲ ಅಂತ ಹೇಳುತ್ತಿದ್ದಾರೆ. ನಮ್ಮ ಪಕ್ಷದ ಶಾಸಕರು ಅವರ ಮನೆಯಲ್ಲಿದ್ದಾರೆಯೇ? ಎಂದು ದೂರಿದರು.

ಡಿ.ಕೆ. ಸುರೇಶ್‌ಗೆ ಒತ್ತಡ
ಸಿ.ಪಿ. ಯೋಗೇಶ್ವರ್‌ ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿಲ್ಲ. ಡಿ.ಕೆ. ಸುರೇಶ್‌ ಅವರನ್ನು ಅಭ್ಯರ್ಥಿಯಾಗಿಸಲು ಒತ್ತಡ ಇದೆ. ಅಲ್ಲದೇ ಪುಟ್ಟಣ್ಣ, ಅಶ್ವತ್ಥ್, ರಘುನಂದನ್‌ ರಾಮಣ್ಣ ಪಟ್ಟಿಯಲ್ಲಿದ್ದಾರೆ. ಅಂತಿಮ ತೀರ್ಮಾನ ಸಿಎಂ, ಡಿಸಿಎಂ ನಿರ್ಧರಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next