Advertisement

ಲಾರ್ಡ್ಸ್‌ ಸ್ಟೇಡಿಯಂನಲ್ಲಿ ಕಿಚ್ಚ ಕಮಾಲ್‌

09:17 AM Jun 16, 2019 | Lakshmi GovindaRaj |

ಸದ್ಯ ಎಲ್ಲೆ ನೋಡಿದ್ರು ವರ್ಲ್ಡ್ ಕಪ್‌ ಕ್ರಿಕೆಟ್‌ ಫೀವರ್‌. ಅದರಲ್ಲೂ ಕ್ರಿಕೆಟ್‌ ತವರು ಇಂಗ್ಲೆಂಡ್‌ನ‌ಲ್ಲಿ ವರ್ಲ್ಡ್ ಕಪ್‌ ಅಬ್ಬರ ಜೋರಾಗಿದೆ. ಇದರ ನಡುವೆಯೇ ಲಾರ್ಡ್ಸ್‌ ಮೈದಾನದಲ್ಲಿ ನಟ ಕಿಚ್ಚ ಸುದೀಪ್‌ ಕೂಡ ಬ್ಯಾಟ್‌ ಹಿಡಿದು ಅಬ್ಬರಿಸುತ್ತಿದ್ದಾರೆ. ಹೌದು, ಚಿತ್ರೀಕರಣದಿಂದ ಬ್ರೇಕ್‌ ಪಡೆದು ಸುದೀಪ್‌ ಕೆಲ ದಿನಗಳ ಹಿಂದಷ್ಟೇ ವಿದೇಶಕ್ಕೆ ಹಾರಿದ್ದಾರೆ. ಜೊತೆಗೆ ತಮ್ಮ ಕ್ರಿಕೆಟ್‌ ತಂಡವನ್ನು ಕರೆದೊಯ್ದಿದ್ದಾರೆ.

Advertisement

ಪ್ರತಿವರ್ಷದಂತೆ ಈ ವರ್ಷ ಕೂಡ ಕಾರ್ಪೋರೆಟ್‌ ಕ್ರಿಕೆಟ್‌ ಲೀಗ್‌ ನಡೆಯುತ್ತಿದ್ದು, ಸಿನಿಮಾ ಸೆಲೆಬ್ರಿಟಿಗಳ ಜೊತೆ ವೃತ್ತಿ ನಿರತ ಆಟಗಾರರು ಸೇರಿ ನಡೆಸುವ ಈ ಕ್ರಿಕೆಟ್‌ ಲೀಗ್‌ನಲ್ಲಿ ಸುದೀಪ್‌ ಮತ್ತು ತಂಡ ಭಾಗಿಯಾಗುತ್ತಿದೆ. ಇನ್ನು ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ಈ ಲೀಗ್‌ನ ಮೊದಲ ಪಂದ್ಯ ನಡೆದಿದ್ದು, ಮೊದಲ ಪಂದ್ಯದಲ್ಲೆ ಸುದೀಪ್‌ ಆ್ಯಂಡ್‌ ಟೀಮ್‌ ಜಯಭೇರಿ ಬಾರಿಸಿ ಗೆಲುವಿನ ನಗು ಬೀರಿದೆ.

ಸುದೀಪ್‌ ಮತ್ತು ತಂಡದ ಸದಸ್ಯರು ತಮ್ಮ ಮೊದಲ ಪಂದ್ಯ ಗೆದ್ದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಖುಷಿಯ ನಡುವೆಯೇ ಸುದೀಪ್‌ ಬಳಗಕ್ಕೆ ಇನ್ನೊಂದು ದುಃಖ ಕೂಡ ಕಾಡುತ್ತಿದೆ. ಕಳೆದ ಬಾರಿ ಈ ಲೀಗ್‌ ಪಂದ್ಯದಲ್ಲಿ ಸುದೀಪ್‌ ತಂಡದಲ್ಲಿ ನಟ ಮತ್ತು ಕ್ರಿಕೆಟ್‌ ಆಟಗಾರ ಧ್ರುವ ಶರ್ಮಾ ಜೊತೆಯಾಗಿದ್ದರು.

ಆದರೆ ಅಕಾಲಿಕ ನಿಧನದಿಂದ, ಸುದೀಪ್‌ ಮತ್ತವರ ತಂಡದೊಂದಿಗೆ ಸುದೀರ್ಘ‌ ಒಡನಾಟ ಹೊಂದಿದ್ದ ಧ್ರುವ ಈಗ ತಂಡದಲ್ಲಿಲ್ಲ. ಈ ದುಃಖ ಸಹಜವಾಗಿಯೇ ಸುದೀಪ್‌ ಮತ್ತವರ ತಂಡಕ್ಕೆ ಕಾಡುತ್ತಿದೆ. ಇನ್ನು ಅಗಲಿದ ಸ್ನೇಹಿತನ ಸ್ಮರಣಾರ್ಥ ಮೊದಲ ಪಂದ್ಯದ ಗೆಲುವನ್ನು ಧ್ರುವ ಅವರಿಗೆ ಸಮರ್ಪಿಸಿದ್ದಾರೆ.

Advertisement

ಈ ಬಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಬರೆದುಕೊಂಡಿರುವ ಸುದೀಪ್‌, ಈ ಗೆಲುವನ್ನು ಧ್ರುವ ಅವರಿಗೆ ಅರ್ಪಿಸಿರುವುದಾಗ ಹೇಳಿದ್ದಾರೆ. ಸದ್ಯ ಮೊದಲ ಪಂದ್ಯದಲ್ಲೇ ಗೆದ್ದು ಬೀಗುತ್ತಿರುವ ಸುದೀಪ ತಂಡಕ್ಕೆ ಚಿತ್ರರಂಗದಿಂದ ಮತ್ತು ಫ್ಯಾನ್ಸ್‌ ಕಡೆಯಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next