Advertisement

Karkala ಆನ್‌ಲೈನ್‌ ವಂಚನೆ: ಹಣ ಕಳಕೊಂಡ ವ್ಯಕ್ತಿ

10:49 PM Jun 22, 2024 | Team Udayavani |

ಕಾರ್ಕಳ: ಆನ್‌ಲೈನ್‌ ವಂಚಕರ ಜಾಲಕ್ಕೆ ಸಿಲುಕಿದ ವ್ಯಕ್ತಿಯೋರ್ವರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಕಾರ್ಕಳ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದೆ.

Advertisement

ಇಲ್ಲಿನ ರಮೇಶ ಅವರಿಗೆ 15 ದಿನದ ಹಿಂದೆ ಷೇರು ಮಾರುಕಟ್ಟೆಗೆ ಸಂಬಂಧಿಸಿ ಇನ್‌ವೆಸ್ಟರ್ ಅಲಾಯೆನ್ಸ್‌ ಎಂಬ ವಾಟ್ಸ್‌ಆ್ಯಪ್‌ ಗ್ರೂಪಿನಿಂದ ದಿಯಾ ಎಂಬ ವ್ಯಕ್ತಿಯ ಸಂದೇಶ ಬಂದಿತ್ತು. ಜೂ. 20ರಂದು ರಮೇಶ್‌ ಅವರು ತಮ್ಮ ಖಾತೆಯಿಂದ ಇನ್‌ವೆಸ್ಟರ್ ಅಲಾಯೆನ್ಸ್‌ ಬಳಗದ ಸದಸ್ಯ ಸುರೇಶ ಕುಮಾರ ಎಂಬಾತನ ಎಸ್‌ಬಿಐ ಖಾತೆಗೆ 10,87,755 ರೂ. ವರ್ಗಾವಣೆ ಮಾಡಿದ್ದರು.

ಹಣ ಪಾವತಿಯಾದ ಕೂಡಲೇ ಅತ್ತ ಕಡೆಯವರು ನನ್ನ ಮೊಬೈಲ್‌ ನಂಬರ್‌ ಹಾಗೂ ನನ್ನನ್ನು ಆ ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ಬ್ಲಾಕ್‌ ಮಾಡುವ ಮೂಲಕ ವಂಚಿಸಿದ್ದಾರೆ ಎಂದು ರಮೇಶ ಅವರು ನಗರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next