Advertisement

Karkala: ಜೈಲಿನಲ್ಲಿದ್ದ ಮಗನನ್ನು ಮಾತನಾಡಿಸಿ ಬಂದಿದ್ದ ತಾಯಿ ಆತ್ಮ*ಹತ್ಯೆ

09:24 PM Sep 13, 2024 | Team Udayavani |

ಕಾರ್ಕಳ: ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ಮಾತಾಡಿಸಿಕೊಂಡು ಬಂದ ತಾಯಿ ಅದೇ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ ಘಟನೆ ನಲ್ಲೂರು ಎಂಬಲ್ಲಿ ನಡೆದಿದೆ.

Advertisement

ನಲ್ಲೂರು ಗ್ರಾಮದ ಪ್ರೇಮಾ ಮೃತರು. ಪುತ್ರ ಸುಮಂತ್‌ ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಒಂದೂವರೆ ತಿಂಗಳ ಹಿಂದೆ ವಾರಂಟ್‌ನಲ್ಲಿ ಬಂಧಿಸಿದ್ದರು. ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ತಾಯಿ ಪ್ರೇಮಾ ಸೆ. 11ರಂದು ಜೈಲಿಗೆ ತೆರಳಿ ಮಾತಾಡಿಸಿಕೊಂಡು ಬಂದಿದ್ದರು. ಬಳಿಕ ಚಿಂತೆಯಲ್ಲಿದ್ದ ಅವರು ರಾತ್ರಿ ಊಟ ಮಾಡಿ ಮಲಗಿದ್ದರು. ಮರುದಿನ ಬೆಳಗ್ಗೆ ಅವರು ಕಾಣದಿದ್ದಾಗ ಮನೆಯವರು ಹುಡುಕಾಡಿದ ವೇಳೆ ಮನೆ ಪಕ್ಕದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next