Advertisement

Gangolli: ಮೀನುಗಾರಿಕೆ ಸೊತ್ತು ಮಾರಿ ಲಕ್ಷಾಂತರ ರೂ. ವಂಚನೆ

12:08 AM Sep 27, 2024 | Team Udayavani |

ಗಂಗೊಳ್ಳಿ: ನಾಡದೋಣಿ ಪಾಲುದಾರಿಕೆ ನಡೆಸಲು ನೀಡಿದ್ದ ಆರೋಪಿಗಳಾದ ದಿನೇಶ ಹಾಗೂ ರಾಜು ಅವರು ತನ್ನನ್ನು ನಂಬಿಸಿ, ಕಂಚುಗೋಡು ಮಡಿ ಎಂಬಲ್ಲಿ ಇಟ್ಟಿದ್ದ ನಾಡದೋಣಿಯ 22.91 ಲಕ್ಷ ರೂ. ಮೌಲ್ಯದ ಮೀನುಗಾರಿಕೆ ಸೊತ್ತುಗಳನ್ನು ಮಾರಿ ವಂಚಿಸಿರುವುದಾಗಿ ನವಿಮುಂಬಯಿಯ ಸುಧೀರ್‌ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಆರೋಪಿಗಳು 12.20 ಲಕ್ಷ ರೂ. ಮೌಲ್ಯದ ಬಲೆ, 3.36 ಲಕ್ಷ ರೂ. ಮೌಲ್ಯದ ಸೀಸ, 2.18 ಲಕ್ಷ ರೂ. ಮೌಲ್ಯದ ದೋಣಿ ಎಂಜಿನ್‌, 36 ಸಾವಿರ ರೂ. ಫ್ಲೋಟ್‌, 71 ಸಾವಿರ ರೂ. ಮೌಲ್ಯದ ಸೀಮೆಎಣ್ಣೆ ತುಂಬುವ ಬ್ಯಾರೆಲ್‌ಗ‌ಳು, 76 ಸಾವಿರ ರೂ. ಮೌಲ್ಯದ ಟಿವಿ, ಕೆಮರಾ, 35 ಸಾವಿರ ರೂ. ಮೌಲ್ಯದ 3 ಬ್ಯಾಟರಿ, ಕೇಬಲ್‌, ಬಾಕ್ಸ್‌, 1.22 ಲಕ್ಷ ರೂ. ಮೌಲ್ಯದ ರೋಪ್‌, 20 ಸಾವಿರ ರೂ. ಮೌಲ್ಯದ ಕ್ಯಾನ್‌ಗಳು, 42 ಸಾವಿರ ರೂ. ಮೌಲ್ಯದ ಜಿಪಿಎಸ್‌ ಕಂಬಗಳು 5 ಸಾವಿರ ರೂ. ಮೌಲ್ಯದ ರಾಟೆ, 72 ಸಾವಿರ ರೂ. ಮೌಲ್ಯದ ಹಿತ್ತಾಳೆ ರಿಂಗ್‌, 38 ಸಾವಿರ ರೂ. ಮೌಲ್ಯದ ಎಂಜಿನ್‌ ಆಯಿಲ್‌ ತುಂಬಿದ ಬ್ಯಾರೆಲ್‌ ಸಹಿತ ಒಟ್ಟು 22.91 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಯಾರಿಗೋ ಮಾರಾಟ ಮಾಡಿ, ವಂಚಿಸಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next