Advertisement

Gangolli: ದೋಣಿಯ ಸೊತ್ತು ಮಾರಾಟ ಮಾಡಿ 22 ಲಕ್ಷ ರೂ. ವಂಚನೆ

08:47 PM Sep 27, 2024 | Team Udayavani |

ಗಂಗೊಳ್ಳಿ: ಸುಧೀರ್‌ ಮುಂಬಯಿ ಅವರಿಗೆ ದಿನೇಶ ಮತ್ತು ರಾಜು ಮೀನುಗಾರಿಕೆಯ ದೋಣಿ ಪಾಲುದಾರಿಕೆಯಲ್ಲಿ 22 ಲಕ್ಷ ರೂ. ವಂಚಿಸಿದ್ದಾರೆ ಎಂದು ದೂರಲಾಗಿದೆ.

Advertisement

ಸುಧೀರ್‌ ಈ ಇಬ್ಬರಿಗೆ ನಾಡದೋಣಿಯನ್ನು ಪಾಲುದಾರಿಕೆಯನ್ನು ನಡೆಸಲು ನೀಡಿದ್ದು, ಮೀನುಗಾರಿಕೆಗೆ ಮಳೆಗಾಲದ ರಜೆ ಇರುವುದರಿಂದ ದೋಣಿಯನ್ನು ಕಂಚುಗೋಡು ಮಡಿ ಎಂಬಲ್ಲಿ ಇಟ್ಟು ದೋಣಿಯಲ್ಲಿದ್ದ ಬಲೆ ಹಾಗೂ ಇತರ ಸಾಮಗ್ರಿಗಳನ್ನು ದೋಣಿ ವ್ಯವಹಾರವನ್ನು ನಡೆಸಿಕೊಳ್ಳಲು ಬಿಟ್ಟಿದ್ದ ದಿನೇಶ್‌ ತನ್ನ ಮನೆಯಲ್ಲಿ ಇರಿಸಿಕೊಳ್ಳುವುದಾಗಿ ಹೇಳಿದ್ದರು.

ಅಲ್ಲಿಂದ ಕೆಲವು ಸಾಮಗ್ರಿಗಳನ್ನು ಕಂಚುಗೋಡು ಮಡಿ ನಾಗರಾಜ ಅವರ ಜಾಗದಲ್ಲಿ ಇಟ್ಟು ಪೂಜೆ ಮಾಡಿಸಿದ್ದರು. ಉಳಿದ ಸಾಮಗ್ರಿಗಳು ದಿನೇಶ್‌ ಮನೆಯಲ್ಲೇ ಇತ್ತು. ಸುಧೀರ್‌, ಕಂಚುಗೋಡು ಮಡಿಯ ನಾಗರಾಜ ಅವರ ಜಾಗಕ್ಕೆ ಬಂದು ನೋಡಿದಾಗ ಸಾಮಗ್ರಿಗಳು ಇರಲಿಲ್ಲ. ದಿನೇಶ್‌ ಮನೆಗೆ ಹೋದಾಗ ಅಲ್ಲೂ ಕೆಲವು ಸಾಮಗ್ರಿಗಳು ಇರಲಿಲ್ಲ. ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡಿಲ್ಲ. ದಿನೇಶ್‌ ಮನೆಯಲ್ಲಿ ಇಟ್ಟಿದ್ದ ಒಟ್ಟು 22,91,000 ರೂ.ಗಳ ಸೊತ್ತುಗಳನ್ನು ದಿನೇಶ್‌ ಹಾಗೂ ರಾಜು ಸೇರಿ ಯಾರಿಗೋ ಮಾರಾಟ ಮಾಡಿ ವಂಚಿಸಿರುವುದಾಗಿ ಸುಧೀರ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next