Advertisement

ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಗೆ ನೂತನ ರಜತ ರಥ ಸಮರ್ಪಣೆ

01:00 AM Mar 22, 2019 | Harsha Rao |

ಕಾಪು: ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ಜರಗಿದ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ 1 ಕೋ.ರೂ. ಮೌಲ್ಯದ ನೂತನ ರಜತ ರಥ ಸಮರ್ಪಣೆ ಮತ್ತು 75 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶ್ರೀ ಕಾಶೀ ಮಠಾಧಿಪತಿ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದರು.

Advertisement

ಆಡಂಬರದ ಭಕ್ತಿಗಿಂತ ಶ್ರದ್ಧೆ, ಶುದ್ಧ ಮನಸ್ಸಿನ ಭಕ್ತಿಗೆ ಭಗವಂತ ಶೀಘ್ರ ಒಲಿದು,  ಅನುಗ್ರಹ ಕರುಣಿಸುತ್ತಾನೆ. ಕಾಪು ವೆಂಕಟರಮಣ ದೇವರು ಮತ್ತು ಕಾಪು ಮಾರಿಯಮ್ಮ ದೇವಿಯ ಅನುಗ್ರಹ ಹಾಗೂ ಸಮಸ್ತ ಭಕ್ತರ ಒಗ್ಗೂಡುವಿಕೆಯ ಫಲವಾಗಿ ಸಂಕಲ್ಪಿತ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತಿವೆ ಎಂದು ಸ್ವಾಮೀಜಿ ಹೇಳಿದರು.
ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ/ ಆಡಳಿತ ಮಂಡಳಿ ಅಧ್ಯಕ್ಷ ಕೆ. ಪ್ರಸಾದ್‌ ಗೋಕುಲ್‌ದಾಸ್‌ ಶೆಣೈ, ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್‌, ರಾಜೇಶ್‌ ಮಾಧವರಾಯ ಶೆಣೈ, ರಾಮ ಶಶಿಧರ ನಾಯಕ್‌, ಶ್ರೀಕಾಂತ ಲಕ್ಷ್ಮೀನಾರಾಯಣ ಭಟ್‌, ಆಡಳಿತ ಮಂಡಳಿ ಸದಸ್ಯರಾದ ಸಂಜಯ ಹರಿ ಭಟ್‌, ಮೋಹನದಾಸ್‌ ಕಿಣಿ, ಪ್ರಬಂಧಕ ಚಂದ್ರಕಾಂತ ಕಾಮತ್‌ ಉಪಸ್ಥಿತರಿದ್ದರು. 

ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೈ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next