Advertisement

ಕಣ್ವಮಠದ ಶ್ರೀ ಪೀಠತ್ಯಾಗ ಘೋಷಣೆ

11:22 PM Sep 18, 2019 | Team Udayavani |

ಗಂಗಾವತಿ: ಮಹಿಳೆಯ ಜತೆ ಅಶ್ಲೀಲವಾಗಿ ಸಂಭಾಷಣೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಣ್ವಮಠದ ವಿದ್ಯಾವಾರಿಧಿ ಸ್ವಾಮೀಜಿ ಪೀಠ ತ್ಯಾಗ ಮಾಡುವುದಾಗಿ ಘೋಷಿಸಿದ್ದಾರೆ. ಪ್ರಕರಣ ಸಂಬಂಧ ಗಂಗಾವತಿ ಕಣ್ವಮಠದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.

Advertisement

ಇದಕ್ಕೂ ಮುನ್ನ ನಗರದ ಯಾಜ್ಞವಲ್ಕ ದೇಗುಲದಲ್ಲಿ ಬುಧವಾರ ಸಂಜೆ ಸಭೆ ನಡೆಸಿ ಸ್ವಾಮೀಜಿ ಕೃತ್ಯವನ್ನು ಭಕ್ತರು ಖಂಡಿಸಿ ಪೀಠತ್ಯಾಗ ಮಾಡುವಂತೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ನರಸಿಂಹಮೂರ್ತಿ ಆಲಂಪಲ್ಲಿ ಮಾತನಾಡಿ, ಕಣ್ವಮಠದ ಪೀಠಾಧಿ ಪತಿ ಮಹಿಳೆಯ ಜತೆ ನಡೆಸಿದ ಸಂಭಾಷಣೆ ಅತ್ಯಂತ ಕೆಟ್ಟದ್ದಾಗಿದೆ. ಸ್ವಾಮೀಜಿ ಕೂಡಲೇ ಪೀಠ ತ್ಯಾಗ ಮಾಡಿ ಬೇರೊಬ್ಬರನ್ನು ಪೀಠಕ್ಕೆ ತರುವ ಭಕ್ತರ ಯತ್ನಕ್ಕೆ ಸಹಕಾರ ನೀಡಬೇಕು. ಪ್ರಕರಣದಿಂದ ಇಡೀ ಭಕ್ತ ಕುಟುಂಬ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next