Advertisement

 ಕಲ್ಲಡ್ಕ ಭಟ್‌ ದೈವ ಭೂತದ ಅಸ್ತಿತ್ವವನ್ನೇ ಪ್ರಶ್ನಿಸಿದ್ದಾರೆ:ಸಚಿವ ರೈ

02:24 PM Apr 10, 2018 | |

ಮಂಗಳೂರು: ‘ಕಲ್ಲಡ್ಕ ಪ್ರಭಾಕರ್ ಭಟ್  ಕರಾವಳಿಯ ದೈವ ಭೂತದ‌ ಅಸ್ತಿತ್ವ ಪ್ರಶ್ನೆ ಮಾಡಿದ್ದಾರೆ’ ಎಂದು ಸಚಿವ ರಮನಾಥ್‌ ರೈ ಕಿಡಿ ಕಾರಿದ್ದಾರೆ. 

Advertisement

 ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಸಚಿವ ರೈ 
ಕಲ್ಲಡ್ಕ ಪ್ರಭಾಕರ್ ಭಟ್ ಅವರ ಸಚಿವ ಖಾದರ್‌ ವಿರುದ್ಧದ ಹೇಳಿಕೆಗೆ ಆಕ್ರೋಶ ಹೊರ ಹಾಕಿದರು. 

‘ಪ್ರಸಾದ ಕೊಡುವ ಭೂತ ಕಟ್ಟುವವನಿಗೆ ತಲೆ ಸರಿ ಇಲ್ಲ ಅಂದಿದ್ದಾರೆ. ಆದರೆ ಪ್ರಸಾದ ಕೊಡುವುದು ಭೂತ ಕಟ್ಟುವವನಲ್ಲ,ನಮ್ಮ ನಂಬಿಕೆ ಪ್ರಸಾದ ಕೊಡುವುದು ದೈವಗಳು. ಭಟ್‌ ಹೇಳಿಕೆ ದೈವಕ್ಕೆ ತಲೆ ಸರಿಯಿಲ್ಲ ಎಂದಂತಾಗಿದೆ. ಹಿಂದುತ್ವವಾದಿ ಎಂದು ಹೇಳಿಕೊಂಡು ಭೂತದ ಅಸ್ತಿತ್ವವನ್ನೇ  ಭಟ್‌  ಪ್ರಶ್ನೆ ಮಾಡಿದ್ದಾರೆ’ ಎಂದರು. 

‘ದ.ಕ. ಜಿಲ್ಲೆ  ಬಿಜೆಪಿ ಕಾರ್ಯಕರ್ತರಲ್ಲಿ ಬಹಳಷ್ಟು ಅಸಮಾಧಾನವಿದ್ದು, ಅಂತಹ ಹಲವರು 
 ನಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಘೋಷಣೆಗೆ ಅವರು ಕಾಯುತ್ತಿದ್ದು, ಟಿಕೆಟ್ ಘೋಷಣೆ ಬಳಿಕ ಹಲವು ನಾಯಕರು ಕಾಂಗ್ರೆಸ್ ಸೇರಲಿದ್ದಾರೆ.ಬಿಜೆಪಿಯೊಳಗೇ ಬದಲಾವಣೆಯ ಗಾಳಿ ಬೀಸಲಿದೆ’ ಎಂದು ಬಾಂಬ್‌ ಸಿಡಿಸಿದರು. 

‘ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಅತೃಪ್ತಿ ಇಲ್ಲ ಎಂದ ಅವರು  ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ’ ಎಂದರು. 

Advertisement

ಪ್ರಭಾಕರ್‌ ಭಟ್‌ ಅವರು ಖಾದರ್‌ ಅವರು ದೈವಸ್ಥಾನಕ್ಕೆ ತೆರಳಿ ಪ್ರಸಾದ ಪಡೆದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅವರು ತೆರಳಿರುವ ದೇವಸ್ಥಾನಕ್ಕೆ ಇನ್ನೊಮ್ಮೆ ಬ್ರಹ್ಮ ಕಲಶೋತ್ಸವ ಮಾಡಬೇಕು ಎಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next