Advertisement

Belthangady ದೇವಸ್ಥಾನಗಳ ಆದಾಯ ಅದೇ ಕ್ಷೇತ್ರದ ಅಭಿವೃದ್ಧಿಗೆ: ಸಚಿವ ರಾಮಲಿಂಗ ರೆಡ್ಡಿ

12:44 AM Oct 05, 2023 | Team Udayavani |

ಬೆಳ್ತಂಗಡಿ: ದೇವಸ್ಥಾನಗಳ ಒಂದು ಪೈಸೆಯನ್ನೂ ಬೇರೆ ಕಡೆ ವ್ಯಯ ಮಾಡಲು ಮಾಡಲು ಸಾಧ್ಯವಿಲ್ಲ. ಎಲ್ಲವನ್ನೂ ಆಯಾ ದೇವಸ್ಥಾನದ ಅಭಿವೃದ್ಧಿಗೇ ಬಳಸಲಾಗುತ್ತದೆ. ಈ ಬಗ್ಗೆ ಅಪಪ್ರಚಾರ ಸಲ್ಲದು ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

Advertisement

ಧರ್ಮಸ್ಥಳದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಸರಕಾರ ಆರಂಭಿಸಿದ್ದ “ಸಪ್ತಪದಿ’ ಯೋಜನೆಯನ್ನು ಮುಂದುವರಿಸುವ ಜತೆಗೆ ಕಾಶೀ ಯಾತ್ರೆ ಸಹಿತ ತೀರ್ಥ ಯಾತ್ರೆಗೂ ರಾಜ್ಯ ಸರಕಾರದಿಂದ ಸಹಕಾರ ನೀಡಲಾಗುವುದು ಎಂದರು.

4 ಸಾವಿರ ಬಸ್‌ ಖರೀದಿ, 13 ಸಾವಿರ ಸಿಬಂದಿ ನೇಮಕ
ಕೆಎಸ್ಸಾರ್ಟಿಸಿ ಹಾಗೂ ಇತರ ನಿಗಮಗಳಿಗೆ 13 ಸಾವಿರ ಸಿಬಂದಿ ನೇಮಕ ಹಾಗೂ 4 ಸಾವಿರ ಬಸ್‌ಗಳನ್ನು ಖರೀದಿಸುವುದಾಗಿ ಇದೇ ವೇಳೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next