Advertisement

ಬಾಗೂರಿಗೆ ನೀರು ಶುದ್ಧೀಕರಣ ಘಟಕ ಮಂಜೂರು: ಗೂಳಿಹಟ್ಟಿ

05:28 PM Apr 26, 2020 | Naveen |

ಹೊಸದುರ್ಗ: ಬಾಗೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದೆ. ಹಾಗಾಗಿ ಎರಡು ಕುಡಿಯುವ ನೀರು ಶುದ್ಧೀಕರಣ ಘಟಕಗಳನ್ನು ಮಂಜೂರು ಮಾಡುವುದಾಗಿ ಶಾಸಕ ಗೂಳಿಹಟ್ಟಿ ಶೇಖರ್‌ ಭರವಸೆ ನೀಡಿದರು.

Advertisement

ಬಾಗೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬಹು ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಲ್ಲಿರುವ ಕಾರಣ ಬಹು ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ಶೀಘ್ರದಲ್ಲಿ ಸ್ಥಾಪಿಸುವುದಾಗಿ ಹೇಳಿದರು. ಗ್ರಾಮದಲ್ಲಿ ಎರಡು ಕಡೆ ನೀರು ಕೆರೆ ಇರುವುದರಿಂದ ಭದ್ರಾ ಮೇಲ್ದಂಡೆ ಯೋಜನೆ ಅಡಿ ನೀರು ತುಂಬಿಸಲಾಗುವುದು.ನೀರು ಬಸಿಯುವಿಕೆಯಿಂದ ಬರುವ ನೀರನ್ನು ಹೊರ ಹಾಕಲು ರಾಜಕಾಲುವೆ ನಿರ್ಮಾಣ ಮಾಡಲಾಗುವುದು. ಗ್ರಾಮದ ಮೂಡಲ ಕೆರೆ ಏರಿ ದುರಸ್ತಿ ಅಗತ್ಯವಿದ್ದು ಸಣ್ಣ ನೀರಾವರಿ ಇಲಾಖೆಯಿಂದ ಮಣ್ಣು ಹಾಕುವುದು, ಕಲ್ಲು ಪಿಚ್ಚಿಂಗ್‌ ಮಾಡಿಸುವ ಮೂಲಕ ಏರಿ ಭದ್ರತೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದ ಆಶಾ ಕಾರ್ಯಕರ್ತೆಯರಾದ ಶೋಭಾ ಹಾಗೂ ಪದ್ದಮ್ಮ ಅವರನ್ನು ಅಭಿನಂದಿಸಿದ ಶಾಸಕರು, ಅವರಿಂದ ಬಾಗೂರು ಗ್ರಾಮದ ಮಾಹಿತಿ ಪಡೆದರು. ನಿಮ್ಮೆಲ್ಲರ ಸೇವೆಯನ್ನು ದೇಶದ ಜನತೆ ಅಭಿನಂದಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಬಾಗೂರಿನ ನೀರಗಂಟಿ ರಾಘವೇಂದ್ರ ಮನೆಗೆ ಭೇಟಿ ನೀಡಿದ ಗೂಳಿಹಟ್ಟಿ, ಚಿಕಿತ್ಸೆಗಾಗಿ 50 ಸಾವಿರ ರೂ. ನೀಡಿದರು. ಪರಪ್ಪಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಅಧ್ಯಕ್ಷ ವಾಸುದೇವ್‌, ಮುಖಂಡರಾದ ಪುರುಷೋತ್ತಮ, ವಿಜಯಕುಮಾರ್‌, ಭಜರಂಗದಳದ ಅರುಣ್‌, ಬಿ.ಟಿ. ಸುರೇಶ್‌, ಆಂಜಿನಪ್ಪ, ರುದ್ರೇಶ್‌, ರಾಜು ಹೋವಳೆ, ಮಧು, ರಂಗನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next