Advertisement

ಮುಗಿಯದ ಮಹಾರಾಷ್ಟ್ರ ಸರಕಾರ –ಬಾಲಿವುಡ್‌ ನಟಿ ಜಟಾಪಟಿ: ಸೋನಿಯಾ ಮಧ್ಯ ಪ್ರವೇಶಕ್ಕೆ ಆಗ್ರಹ

01:29 AM Sep 12, 2020 | mahesh |

ಮುಂಬೈ: ಮಹಾರಾಷ್ಟ್ರ ಸರಕಾರದೊಂದಿಗೆ ಜಿದ್ದಿಗೆ ಬಿದ್ದಿರುವ ಬಾಲಿವುಡ್‌ ನಟಿ ಕಂಗನಾ ರಣೌತ್‌ ಈಗ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ­ಗಾಂಧಿಯವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ. ಜತೆಗೆ, ನಿಮ್ಮ ಮೌನವನ್ನು ಇತಿಹಾಸ ನೆನಪಿ­ಟ್ಟು­ಕೊಳ್ಳಲಿದೆ ಎಂದಿದ್ದಾರೆ.

Advertisement

ಶುಕ್ರವಾರ ಟ್ವೀಟ್‌ ಮಾಡಿರುವ ಕಂಗನಾ, “ಗೌರವಾನ್ವಿತ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ, ನೀವೂ ಒಬ್ಬ ಮಹಿಳೆಯಾಗಿ ಮಹಾರಾಷ್ಟ್ರದಲ್ಲಿರುವ ನಿಮ್ಮ ಸರಕಾರವು ನನ್ನನ್ನು ನಡೆಸಿಕೊಂಡ ರೀತಿ ನಿಮಗೆ ದುಃಖ ತಂದಿಲ್ಲವೇ? ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ನಿಮ್ಮ ಸರಕಾರಕ್ಕೆ ನೀವು ಕೋರಬಲ್ಲಿರಾ?’ ಎಂದು ಪ್ರಶ್ನಿಸಿದ್ದಾರೆ.

ಜತೆಗೆ, “ನೀವು ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಬೆಳೆದಿದ್ದೀರಿ, ಭಾರತದಲ್ಲಿ ಬದುಕಿದ್ದೀರಿ. ಮಹಿಳೆಯರ ಕಷ್ಟಗಳು ನಿಮಗೆ ಗೊತ್ತು. ಈಗ ನಿಮ್ಮದೇ ಸರಕಾರ ಒಬ್ಬ ಹೆಣ್ಣಿನ ಮೇಲೆ ದೌರ್ಜನ್ಯ ಎಸಗುತ್ತಿದೆ. ಕಾನೂನು ಸುವ್ಯವಸ್ಥೆ­ಯನ್ನು ಅಣಕವಾಡುತ್ತಿದೆ. ಇಂಥ ಹೊತ್ತಲ್ಲೂ ನೀವು ಸುಮ್ಮನಿದ್ದರೆ, ನಿಮ್ಮ ಮೌನವನ್ನು ಇತಿಹಾಸ ಕ್ಷಮಿಸುವುದಿಲ್ಲ. ಈ ವಿಚಾರದಲ್ಲಿ ನೀವು ಮಧ್ಯಪ್ರವೇಶಿಸುತ್ತೀರಿ ಎಂದು ನಂಬಿದ್ದೇನೆ’ ಎಂದೂ ಕಂಗನಾ ಹೇಳಿದ್ದಾರೆ.

ರಾಜ್ಯಪಾಲರ ಭೇಟಿಯಾದ ಅಠಾವಳೆ: ಇದೇ ವೇಳೆ, ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ಶುಕ್ರವಾರ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರನ್ನು ಭೇಟಿಯಾಗಿ, ಕಂಗನಾಗೆ ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಜತೆಗೆ, ಅವರ ಬಂಗಲೆಗೆ ಭಾಗಶಃ ಹಾನಿ­ಯಾಗಿದ್ದು, ಅದಕ್ಕಾಗಿ ಪರಿಹಾರ ಒದಗಿ­ಸು­ವಂತೆಯೂ ಮನವಿ ಮಾಡಿದ್ದಾರೆ. ಗುರು­ವಾರವಷ್ಟೇ ಅಠಾವಳೆ ಅವರು ಕಂಗನಾ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.

ಕಂಗನಾ ಅಭಿಮಾನಿ ಅರೆಸ್ಟ್‌: ಶಿವಸೇನೆ ಸಂಸದ ಸಂಜಯ್‌ ರಾವತ್‌ಗೆ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಕಂಗನಾ ಅಭಿಮಾನಿಯೆನ್ನಲಾದ ಯುವಕನನ್ನು ಕೋಲ್ಕತ್ತಾದಲ್ಲಿ ಪೊಲೀಸರು ಬಂಧಿ­ಸಿದ್ದಾರೆ. ಕಂಗನಾ ಮತ್ತು ಮಹಾ ಸರಕಾರದ ನಡುವೆ ನಡೆ­ಯು­ತ್ತಿರುವ ಜಟಾಪಟಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಕೋಲ್ಕತ್ತಾದ ಪಲಾಶ್‌ ಘೋಷ್‌, ಶಿವಸೇನೆ ನಾಯಕನಿಗೆ ಬೆದರಿಕೆ ಹಾಕಿದ್ದ. ಈ ಮಾಹಿತಿ ಪಡೆದ ಮುಂಬೈ ಪೊಲೀ­ಸರು ಕೋಲ್ಕತ್ತಾಗೆ ತೆರಳಿ ಅಲ್ಲಿನ ಪೊಲೀಸರ ನೆರವಿನೊಂದಿಗೆ ಆತನನ್ನು ಬಂಧಿಸಿದ್ದಾರೆ.

Advertisement

ದಾವೂದ್‌ ಬಂಗಲೆ ಕಾಣುತ್ತಿಲ್ಲವೇ?: ಶುಕ್ರವಾರ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ದೇವೇಂದ್ರ ಫ‌ಡ್ನವೀಸ್‌, “ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಕಟ್ಟಡಗಳನ್ನು ಕೆಡವದ ನೀವು ಕಂಗನಾ ಬಂಗಲೆಯನ್ನೇಕೆ ಕೆಡವಿದ್ದೀರಿ’ ಎಂದು ಮಹಾರಾಷ್ಟ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.

ಸುರಕ್ಷತಾ ನಿಯಮ ಉಲ್ಲಂಘಿಸಿದ ಮಾಧ್ಯ­ಮ­ಗಳು: ಬುಧವಾರ ಕಂಗನಾ ಅವರು ಆಗ­ಮಿಸಿದ ಚಂಡಿಗಡ-ಮುಂಬೈ ಇಂಡಿಗೋ ವಿಮಾ­­ನದಲ್ಲಿ ಮಾಧ್ಯಮ ಪ್ರತಿನಿಧಿಗಳು ಸುರಕ್ಷತಾ ನಿಯಮವನ್ನು ಉಲ್ಲಂ ಸಿರು­ವುದು ಬೆಳಕಿಗೆ ಬಂದಿದೆ. ಸುರಕ್ಷತೆ ಹಾಗೂ ಸಾಮಾ­ಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯ­ ಮ­ಗಳನ್ನು ಗಾಳಿಗೆ ತೂರಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಹೀಗಾಗಿ ಈ ಕುರಿತು ವರದಿ ನೀಡುವಂತೆ ಇಂಡಿಗೋ ಏರ್‌ಲೈನ್ಸ್‌ಗೆ ನಾಗರಿಕ ವಿಮಾನ­ಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಸೂಚಿಸಿದೆ.

ಲಾಕ್‌ಡೌನ್‌ ವೇಳೆ 500 ಗ್ರಾಂ. ಗಾಂಜಾ ಕೊರಿಯರ್‌!
ಕೋರ್ಟ್‌ನಲ್ಲಿ ರಿಯಾ ಜಾಮೀನಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಎನ್‌ಸಿಬಿ, ಏಪ್ರಿಲ್‌ನಲ್ಲಿ ಲಾಕ್‌ಡೌನ್‌ ವೇಳೆ ರಿಯಾ ಮತ್ತು ಸುಶಾಂತ್‌ 500 ಗ್ರಾಂ ಗಾಂಜಾವನ್ನು ಕೊರಿಯರ್‌ ಮೂಲಕ ತರಿಸಿಕೊಂಡಿದ್ದರು ಎಂದು ಹೇಳಿದೆ. ಲಾಕ್‌ಡೌನ್‌ ವೇಳೆ ರಿಯಾ ಮನೆಯಲ್ಲಿ ಕೆಲಕಾಲ ತಂಗಲು ಸುಶಾಂತ್‌ ನಿರ್ಧರಿಸಿದ್ದರು. ಅದಕ್ಕಾಗಿ ರಿಯಾ ಮನೆಗೇ ಗಾಂಜಾವನ್ನು ತರಿಸಿಕೊಳ್ಳಲು ನಿರ್ಣಯಿಸಿ, ಕೊರಿಯರ್‌ ಕಂಪನಿಯನ್ನು ಸಂಪರ್ಕಿಸಿದ್ದರು ಮತ್ತು 500 ಗ್ರಾಂ. ಗಾಂಜಾ ತರಿಸಿಕೊಂಡಿದ್ದರು ಎಂದು ಎನ್‌ಸಿಬಿ ತಿಳಿಸಿದೆ. ಈಗ ಇವರಿಗೆ ಜಾಮೀನು ನೀಡಿದರೆ, ಸಾಕ್ಷ್ಯನಾಶ ಮಾಡುವ ಸಾಧ್ಯತೆಯಿದೆ ಎಂದೂ ಎನ್‌ಸಿಬಿ ಕೋರ್ಟ್‌ಗೆ ಹೇಳಿದೆ.

ರಿಯಾ, ಶೋವಿಕ್‌ಗಿಲ್ಲ ಜಾಮೀನು
ಡ್ರಗ್‌ ಪ್ರಕರಣ ಸಂಬಂಧ ಬಂಧಿತರಾಗಿರುವ ರಿಯಾ ಚಕ್ರವರ್ತಿ, ಸೋದರ ಶೋವಿಕ್‌ ಹಾಗೂ ಇತರೆ ನಾಲ್ವರ ಜಾಮೀನು ಅರ್ಜಿಗಳನ್ನು ಶುಕ್ರವಾರ ಮುಂಬೈನ ವಿಶೇಷ ಕೋರ್ಟ್‌ ವಜಾ ಮಾಡಿದೆ. ಹೀಗಾಗಿ, ಸದ್ಯ ಎಲ್ಲ ಆರೋಪಿಗಳೂ ನ್ಯಾಯಾಂಗ ವಶದಲ್ಲೇ ಮುಂದು­ವರಿಯುವಂತಾಗಿ­ದೆ. ತನಿಖೆಯು ಮಹತ್ವದ ಘಟ್ಟದಲ್ಲಿ­ರುವ ಕಾರಣ ಈಗ ಜಾಮೀನು ನೀಡಲಾಗದು ಎಂದು ಕೋರ್ಟ್‌ ಹೇಳಿದೆ. ನನ್ನನ್ನು ಈ ಕೇಸಿನಲ್ಲಿ ಸುಖಾಸುಮ್ಮನೆ ಸಿಲುಕಿಸಲಾಗಿದೆ ಎಂದು ರಿಯಾ ವಾದಿಸಿದ್ದು, ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ ಎಂದೂ ಆರೋಪಿಸಿದ್ದಾರೆ.

ಉದ್ಧವ್‌ ಅಯೋಧ್ಯೆ ಭೇಟಿಗೆ ವಿರೋಧ
ಕಂಗನಾ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ವಿರುದ್ಧ ಅಯೋಧ್ಯೆಯ ಸಾಧು-ಸಂತರು ಹಾಗೂ ವಿಶ್ವ ಹಿಂದೂ ಪರಿಷತ್‌ ಗರಂ ಆಗಿದ್ದಾರೆ. ಉದ್ಧವ್‌ ಮತ್ತು ಶಿವಸೇನೆಗೆ ಇನ್ನು ಅಯೋಧ್ಯೆಗೆ ಸ್ವಾಗತವಿಲ್ಲ. ಅವರೇನಾದರೂ ಇಲ್ಲಿಗೆ ಬಂದರೆ ಇಲ್ಲಿನ ಸಾಧು-ಸಂತರ ಪ್ರಬಲ ವಿರೋಧ ಎದುರಿಸಬೇಕಾಗುತ್ತದೆ ಎಂದು ಹನುಮಾನ್‌ ಗಡಿ ದೇಗುಲದ ಅರ್ಚಕ ರಾದ ಮಹಾಂತ ರಾಜು
ದಾಸ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next