Advertisement

ಸಲಗ ತಂಡದಿಂದ ಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ

10:07 AM Aug 14, 2019 | Team Udayavani |

ರಾಜ್ಯದಲ್ಲಿನ ಪ್ರವಾಹ ಸಂತ್ರಸ್ತರಿಗೆ ಬೇರೆ ಬೇರೆ ಕ್ಷೇತ್ರದ ಮಂದಿ ತಮ್ಮ ಸಹಾಯ ಹಸ್ತ ಚಾಚುತ್ತಿದ್ದಾರೆ. ಅದರಲ್ಲಿ ಚಿತ್ರರಂಗದ ಮಂದಿ ಕೂಡಾ ಸೇರಿದ್ದಾರೆ. ಈಗಾಗಲೇ ಚಿತ್ರರಂಗದ ಬಹುತೇಕರು ಪ್ರವಾಹ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಚಿತ್ರತಂಡಗಳು ಕೂಡಾ ಪ್ರವಾಹದಿಂದ ಬದುಕು ಕಳೆದುಕೊಂಡವರಿಗೆ ಅಗತ್ಯ ವಸ್ತುಗಳನ್ನು ಕಲ್ಪಿಸುತ್ತಿದೆ.

Advertisement

ಈಗ “ದುನಿಯಾ’ ವಿಜಯ್‌ ನಿರ್ದೇಶನದ ಜೊತೆಗೆ ನಾಯಕರಾಗಿರುವ “ಸಲಗ’ ಚಿತ್ರತಂಡ ಕೂಡಾ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದೆ. ಆಗಸ್ಟ್‌ 14ರಂದು ಒಂದು ಟ್ರಕ್‌ ಅಗತ್ಯ ವಸ್ತುಗಳೊಂದಿಗೆ “ಸಲಗ’ ಚಿತ್ರತಂಡ ಉತ್ತರ ಕರ್ನಾಟಕದತ್ತ ತೆರಳಲಿದೆ.

ಈ ಬಗ್ಗೆ ಮಾತನಾಡುವ “ಸಲಗ’ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌, “ಬುಧವಾರ ಮಧ್ಯಾಹ್ನ 12 ಗಂಟೆಗೆ ರಾಮಕೃಷ್ಣ ಆಶ್ರಮ ಬಳಿಯಿಂದ ನಮ್ಮ ಟ್ರಕ್‌ ಹೊರಡಲಿದೆ. ಈ ಮೂಲಕ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ನಮ್ಮ ಜೊತೆ ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌, ಆರ್‌.ಚಂದ್ರು ಮೂವೀಸ್‌, ಜಯಣ್ಣ ಫಿಲಂಸ್‌, ಎ.ಪಿ.ಅರ್ಜುನ್‌ ಫಿಲಂಸ್‌ ಕೈ ಜೋಡಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next