Advertisement

ಪ್ರಾರ್ಥನೆಯಲ್ಲಿದೆ ದೊಡ್ಡ ಶಕ್ತಿ

11:55 AM Nov 07, 2021 | Team Udayavani |

ಬೀದರ: ದೇವರ ಪ್ರಾರ್ಥನೆಗಳಲ್ಲಿ ದೊಡ್ಡ ಶಕ್ತಿ ಅಡಗಿದೆ. ವೈದ್ಯರಿಂದ ಗುಣಮುಖವಾಗದ ಅದೆಷ್ಟೋ ಕಾಯಿಲೆಗಳು ಪ್ರಾರ್ಥನೆಗಳಿಂದ ವಾಸಿಯಾಗುತ್ತವೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್‌ ಹೇಳಿದರು.

Advertisement

ತಾಲೂಕಿನ ಬೆಳ್ಳೂರ್‌ನ ಹಮಾಲ ಕಾಲೋನಿಯಲ್ಲಿ ನಡೆದ “ಕಿಂಗ್‌ ಆಫ್‌ ಕಿಂಗ್ಸ್‌ ಮಿನಿಸ್ಟ್ರಿಯ 9ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂದಿರ, ಮಸೀದಿ ಮತ್ತು ಚರ್ಚ್‌ಗಳು ಪ್ರಾರ್ಥನಾ ಮಂದಿರಗಳಾಗಿವೆ. ನಿರ್ಮಲ ಮನಸ್ಸಿನಿಂದ ದೇವರನ್ನು ಪೂಜಿಸಿ, ಪ್ರಾರ್ಥಿಸಿದರೆ ಮನಸ್ಸಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಅಂಥ ಶಕ್ತಿ ಪ್ರಾರ್ಥನೆಯಲ್ಲಿದೆ ಎಂದರು.

ಯೇಸು ಕ್ರಿಸ್ತ ಹುಟ್ಟಿರುವ ಬಗ್ಗೆ ಮೊದಲಿಗೆ ಸಂದೇಶ ನೀಡಿರುವುದು ಕುರುಬ ಸಮುದಾಯವಾಗಿದೆ. ಕ್ರಿಶ್ಚಿಯನ್‌ ಮತ್ತು ಕುರುಬ ಸಮುದಾಯದ ನಡುವೆ ಬಹಳ ವರ್ಷಗಳ ನಂಟು ಇದೆ. ಅದು ದೇವರು ಸೃಷ್ಟಿಸಿದ ನಂಟಾಗಿದೆ. ಆಯಾ ಧರ್ಮ, ಸಮುದಾಯಗಳ ತತ್ವ-ಸಿದ್ದಾಂತಗಳನ್ನು ಅವರವರು ಪಾಲನೆ ಮಾಡುತ್ತಿರುತ್ತಾರೆ ಎಂದು ಹೇಳಿದರು.

ಕ್ರೈಸ್ತ ಸಮುದಾಯದ ಪರವಾಗಿ ಜೆಡಿಎಸ್‌ ಪಕ್ಷ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಕೆಲಸ ಕಾರ್ಯಗಳನ್ನು ಮಾಡಲು ಯಾವತ್ತು ಕೂಡ ಹಿಂದೇಟು ಹಾಕಿಲ್ಲ. ಸಮುದಾಯದ ಮುಖಂಡರು ಬೇಡಿಕೆ ಸಲ್ಲಿಸಿದ ಸಂದರ್ಭದಲ್ಲಿ ಅವುಗಳನ್ನು ಪೂರೈಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಪಾಸ್ಟರ್‌ ಸಾವನ್‌ ಪೌಲ್‌, ಸಿಸ್ಟರ್‌ ನಿರ್ಮಲಾ ಪೌಲ್‌, ಪಾಸ್ಟರ್‌ ರಿಶ್‌ ಕನಾವಳ್ಳಿ ವಿಜಯಪುರ, ಪಾಸ್ಟರ್‌ ಅನಿಲ್‌ ಸೇರಿದಂತೆ ಧರ್ಮಗುರು, ಮುಖಂಡರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next