Advertisement

ಸ್ವಾಮಿ ಸಮ್ಮಾನಕ್ಕೆ ಸುಸ್ತು

12:04 AM Jan 10, 2021 | Team Udayavani |

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಯುವರಾಜ ಅಲಿಯಾಸ್‌ ಸ್ವಾಮಿಯ ನಿವಾಸಕ್ಕೆ ರಾಜ್ಯ ಬಿಜೆಪಿ ನಾಯಕರು ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದ ಫೋಟೋಗಳು ಬಹಿರಂಗಗೊಂಡಿದ್ದು, ಸ್ವಾಮಿ ಸ್ನೇಹದ ಉರುಳು ರಾಜಕಾರಣಿಗಳತ್ತ ತಿರುಗಿದೆ.

Advertisement

ಡಿಸಿಎಂ ಲಕ್ಷ್ಮಣ ಸವದಿ, ವಸತಿ ಸಚಿವ ವಿ. ಸೋಮಣ್ಣ, ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರೊಂದಿಗೆ ಸ್ವಾಮಿ ತೆಗೆಸಿಕೊಂಡಿದ್ದ ಫೋಟೋಗಳು ಬಹಿರಂಗಗೊಂಡಿವೆ.

ತಮಗೆ ಯುವರಾಜ ಪರಿಚಯವಿದ್ದ ಎಂದು ಸವದಿ, ಸೋಮಣ್ಣ ಒಪ್ಪಿಕೊಂಡಿದ್ದಾರೆ. ಆದರೆ ಆತ ವಂಚಕನೆಂದು ಗೊತ್ತಿರಲಿಲ್ಲ ಎಂದಿದ್ದಾರೆ.

ಯುವರಾಜ ಬಲವಂತ ಮಾಡಿದ್ದರಿಂದ ಅವನ ಹೋಗಿದ್ದೆ. ಐಶಾರಾಮಿ ಮನೆ ನೋಡಿ ಅನುಮಾನ ಬಂದಿತ್ತು ಎಂದು ಸವದಿ ಹೇಳಿ ದ್ದಾರೆ. ಸ್ವಾಮಿ ಒತ್ತಾಯಿಸಿದ್ದರಿಂದ ಹೋಗಿದ್ದೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.

ನಿವೃತ್ತ ಎಸ್ಪಿ ಪಾಪಯ್ಯ ವಿಚಾರಣೆ ;

Advertisement

ನಿವೃತ್ತ ನ್ಯಾಯಮೂರ್ತಿ ಅವರನ್ನು ರಾಜ್ಯ ಪಾಲರನ್ನಾಗಿ ಮಾಡುವ ಆಮಿಷ ಒಡ್ಡಿ  ವಂಚಿಸಿರುವ ಪ್ರಕರಣದಲ್ಲಿ ನಿವೃತ್ತ ಎಸ್‌ಪಿ ಪಾಪಯ್ಯ ಅವರ ವಿಚಾರಣೆ ನಡೆಸಲಾಗಿದೆ. ಯುವರಾಜ ಹಣ ಪಡೆದಿದ್ದ ಎಂದು ಅವರು ತಿಳಿಸಿದ್ದಾರೆ. ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ಯುವರಾಜನ ವಿರುದ್ಧ ನಿವೃತ್ತ ನ್ಯಾಯಮೂರ್ತಿ ದೂರು ದಾಖಲಿಸಿದ್ದಾರೆ.

ಸಚಿವ ಸ್ಥಾನದ ಆಮಿಷ :

ಯುವರಾಜ ಕೆಲವು ಶಾಸಕರನ್ನು ಭೇಟಿ ಮಾಡಿ ಸಚಿವ ಸ್ಥಾನದ ಆಮಿಷ ಒಡ್ಡಿದ್ದ. ಈ ಬಗ್ಗೆ ತನಿಖಾ ತಂಡ ಮಾಹಿತಿ ಕಲೆಹಾಕುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್‌ ನಾಯಕ ಕೆ.ಸಿ. ವೇಣುಗೋಪಾಲ್‌ ಜತೆಗೆ ಆತ ತೆಗೆಸಿಕೊಂಡಿದ್ದ ಫೋಟೋ ಕೂಡ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next