Advertisement

ಮದುವೆ ಸಮಾರಂಭದಲ್ಲಿ ಪರಿಸರ ಜಾಗೃತಿ

12:41 PM Dec 11, 2017 | Team Udayavani |

ಕುದ್ರೋಳಿ: ಪರಿಸರ ಸ್ವಚ್ಛತೆ ಹಾಗೂ ಆಹಾರಗಳ ಮಿತ ಬಳಕೆ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಅದಕ್ಕೆ ಈಗ ಮದುವೆ ಸಮಾರಂಭವೊಂದು ಹೊಸ ಸೇರ್ಪಡೆ.

Advertisement

ಸ್ವಚ್ಛ ಭಾರತ ಕಾರ್ಯಕ್ರಮ ಪ್ರೇರಣೆ
ಪಡೀಲ್‌ನ ಸಿವಿಲ್‌ ಕಂಟ್ರ್ಯಾಕ್ಟರ್‌ ವಿಟ್ಠಲ್‌ ಆಚಾರ್‌ ಅವರ ಪುತ್ರಿ ಹರ್ಷಿತಾ ಹಾಗೂ ಮಂಜುನಾಥ್‌ ಅವರ ವಿವಾಹವು ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೂಟಕ್ಕಳ ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆಯಿತು. ಸಮಾರಂಭದಲ್ಲಿ ಯಾವುದೇ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದೆ ಪರಿಸರದ ಸ್ವಚ್ಛತೆ ಬಗ್ಗೆ ಹಾಗೂ ಆಹಾರ ಪೋಲು ಮಾಡಬಾರದು ಎಂಬ ಬರಹಗಳನ್ನು ಬರೆದು ಆಮಂತ್ರಿತರಲ್ಲಿ ಜಾಗೃತಿ ಉಂಟುಮಾಡಲಾಯಿತು. ಸ್ವಚ್ಛ ಭಾರತ ಪರಿಕಲ್ಪನೆಯಂತೆ ಪ್ಲಾಸ್ಟಿಕ್‌ ಮುಕ್ತವಾಗಿ ಮದುವೆ ಆಯೋಜಿಸಿ ಜಾಗೃತಿ ಮೂಡಿಸಿರುವುದು ವಿಶೇಷ.

ರಸಮಂಜರಿ
ಕಾರ್ಯಕ್ರಮದಲ್ಲಿ ಅಂಧಕಲಾವಿದರ ಸಂಗೀತ ರಸಮಂಜರಿಗೂ ಅವಕಾಶ ನೀಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next