Advertisement

ಕಾಲೇಜು ಹಂತದಲ್ಲಿ ದಾರಿ ತಪ್ಪಬೇಡಿ

08:50 PM Sep 11, 2019 | Team Udayavani |

ಹುಣಸೂರು: ಕಾಲೇಜು ಹಂತದಲ್ಲಿ ವಿದ್ಯಾರ್ಥಿನಿಯರು ದಾರಿ ತಪ್ಪುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಯೋಸಹಜ ವಾಂಛೆಗಳನ್ನು ದೂರವಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಲಿ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ಜಿ.ದೀಪಾ ಸಲಹೆ ನೀಡಿದರು.

Advertisement

ನಗರದ ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಎನ್‌ಎಸ್‌ಎಸ್‌ ಘಟಕ, ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯಾ ಧಿಕಾರಿಗಳ ಕಚೇರಿ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪೋಷಣ್‌ ಅಭಿಯಾನ ಮತ್ತು ಬೇಟಿ ಬಚಾವ್‌ ಬೇಟಿ ಪಡಾವ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಮಕ್ಕಳ ರಕ್ಷಣೆಗಾಗಿ ನವಜಾತ ಶಿಶುವಿನ ಹಂತದಿಂದ ಆರಂಭಿಸಿ ವಯೊವೃದ್ಧರಾಗುವವರೆಗೂ ಸರ್ಕಾರದಿಂದ ವಿವಿಧ ಸವಲತ್ತು, ಕಾನೂನು ಇಲಾಖೆಯಿಂದ ಕಾನೂನು ಸೌಲಭ್ಯ ಒದಗಿಸಲಾಗಿದೆ. ಆದರೆ, ಹೆಣ್ಣುಮಕ್ಕಲು ಅವುಗಳ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವಾಸಗಳಿಸಿ: ವಿದ್ಯಾರ್ಥಿನಿಯರು ತಂದೆತಾಯಿ ವಿಶ್ವಾಸ ಗಳಿಸಿ, ಸಮಾಜದಲ್ಲಿ ಉತ್ತಮ ಬಾಂಧವ್ಯ ರೂಪಿಸಿಕೊಂಡು ಮುನ್ನಡೆದಲ್ಲಿ ಮಾತ್ರ ಪರಿಪೂರ್ಣತೆ ಪಡೆಯಲು ಸಾಧ್ಯ. ನಿಮ್ಮನ್ನು ಹೆತ್ತವರು ನಿಮಗಾಗಿ ತಮ್ಮ ಸುಖವನ್ನು ತ್ಯಾಗ ಮಾಡಿರುತ್ತಾರೆ. ಅದು ನಿಮ್ಮ ನೆನಪಿನಲ್ಲಿರಲಿ. ಪೋಷಕರು ಮತ್ತು ಸಮುದಾಯದ ವಿಶ್ವಾಸದೊಂದಿಗೆ ಸರ್ಕಾರದ ವಿವಿಧ ಸವಲತ್ತುಗಳ ಸದುಪಯೋಗಪಡಿಸಿಕೊಂಡು ಮುನ್ನಡೆಯಿರಿ ಎಂದು ಸಲಹೆ ನೀಡಿದರು.

ವಸ್ತು ಪ್ರದರ್ಶನದಲ್ಲಿ ವಿವಿಧ ಸೊಪ್ಪುಗಳು ಹಾಗೂ ಮೊಳಕೆ ಕಾಳುಗಳನ್ನು ಪ್ರದರ್ಶಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌, ಅತ್ಯುತ್ತಮ ಪೌಷ್ಟಿಕಾಂಶ ಹೊಂದಿರುವ ಸೊಪ್ಪುಗಳು ಮತ್ತು ತರಕಾರಿಗಳ ಬಳಕೆ, ಅವುಗಳಿಂದ ಹೆಣ್ಣುಮಕ್ಕಳಿಗೆ ವಿವಿಧ ಹಂತಗಳಲ್ಲಿ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಸಣ್ಣಹನಮಗೌಡ, ವಕೀಲ ವೆಂಕಟೇಶ್‌, ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಸರ್ಕಾರಿ ಸರ್ಕಾರಿ ಅಭಿಯೋಜಕ ಎಂ.ನಾರಾಯಣ್‌, ವಕೀಲರ ಸಂಘದ ಅಧ್ಯಕ್ಷ ಜಯರಾಂ, ವಕೀಲ ಶಂಕರೇಗೌಡ, ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಕಿರಣ್‌ ಕುಮಾರ್‌, ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಮಹದೇವ್‌, ಸಿಬ್ಬಂದಿ ದೇವಕಿ, ಸರಸ್ವತಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿನಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next