Advertisement

DMK Questions ; ಜಾತಿ, ಸಮಾನತೆ ಬಗ್ಗೆ ಮೋಹನ್‌ ಭಾಗವತ್‌ ನಿಲುವೇನು?

12:19 AM Sep 10, 2023 | Team Udayavani |

ಚೆನ್ನೈ/ಶಿಮ್ಲಾ: ದೇಶದಲ್ಲಿ ಇರುವ ಜಾತಿ ಮತ್ತು ಇತರ ವಿಚಾರಗಳ ಬಗ್ಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಬಳಿ ಯಾವ ಸಮರ್ಥನೆಗಳು ಇವೆ ಎಂದು ಡಿಎಂಕೆಯ ಮುಖವಾಣಿ “ಮುರಸೋಳಿ’ಯಲ್ಲಿ ಬರೆಯಲಾಗಿರುವ ಲೇಖನದಲ್ಲಿ ಪ್ರಶ್ನಿಸಲಾಗಿದೆ. ಇದರ ಜತೆಗೆ ಸನಾತನ ಧರ್ಮವನ್ನು ಸಮರ್ಥಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿಯವರು ಕೇಂದ್ರ ಸಚಿವರಿಗೆ ಸೂಚಿಸಿದ್ದಾರೆ. ಅದರ ಬಗ್ಗೆ ಭಾಗವತ್‌ ಅವರ ಅಭಿಪ್ರಾಯ ಏನು ಎಂದು ಪ್ರಶ್ನಿಸಲಾಗಿದೆ.

Advertisement

ಸನಾತನ ಧರ್ಮದ ವಿರುದ್ಧ ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್‌, ಎ.ರಾಜಾ ಮಾಡಿರುವ ಟೀಕೆಗಳ ವಿರುದ್ಧ ಆಕ್ರೋಶಗಳು ಮುಂದುವರಿದಿರುವಾಗಲೇ ಆ ಪಕ್ಷದ ಮುಖವಾಣಿಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥರಿಗೆ ನೇರ ಪ್ರಶ್ನೆಗಳನ್ನು ಕೇಳಲಾಗಿದೆ. ಜಗತ್ತಿನ ಯಾವುದೇ ಶಕ್ತಿ ಸನಾತನ ಧರ್ಮವನ್ನು ನಾಶಗೊಳಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಶಿಮ್ಲಾದಲ್ಲಿ ಮಾತನಾಡಿದ ಅವರು ವಿಪಕ್ಷಗಳ ಒಕ್ಕೂಟ, ಐ.ಎನ್‌.ಡಿ.ಐ.ಎ. ಮತ್ತು ಕೆಲವು ಮಂದಿ ಬುದ್ಧಿ ಜೀವಿಗಳು ತಮಿಳುನಾಡು ಸಿಎಂ ಪುತ್ರನ ಹೇಳಿಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next