Advertisement

ದೇಸಾಯಿ ಮತ್ತೆ ಬಂದರು

11:24 AM Jul 23, 2018 | Team Udayavani |

ನಿರ್ದೇಶಕ ಸುನೀಲ್‌ಕುಮಾರ್‌ ದೇಸಾಯಿ  ಅವರು ಈ ಹಿಂದೆ “ರೇ’ ಎಂಬ ಚಿತ್ರ ಮಾಡಿದ್ದರು. ಅದಾದ ಬಳಿಕ ಅವರು ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಇತ್ತು. ಹಾಗೆಯೇ, “ಚಿಟ್ಟೆ’ ಚಿತ್ರದ ನಂತರ ಹರ್ಷಿಕಾ ಪೂಣಚ್ಚ ಕೂಡ ಮುಂದೆ ಯಾವ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬ ಪ್ರಶ್ನೆ ಇತ್ತು.

Advertisement

ಈಗ ಇಬ್ಬರೂ ಸೇರಿ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಸುನೀಲ್‌ಕುಮಾರ್‌ ದೇಸಾಯಿ ನಿರ್ದೇಶನದಲ್ಲಿ ಹರ್ಷಿಕಾ ಪೂಣಚ್ಚ ನಾಯಕಿಯಾಗಿ ನಟಿಸಿರುವುದು ಈ ಹೊತ್ತಿನ ವಿಶೇಷ. ಆ ಚಿತ್ರಕ್ಕೆ “ಉದ್ಘರ್ಷ’ ಎಂದು ಹೆಸರಿಡಲಾಗಿದೆ. “ನಿಷ್ಕರ್ಷ’ ಸುನೀಲ್‌ಕುಮಾರ್‌ ದೇಸಾಯಿ ಅವರ ಸೂಪರ್‌ ಹಿಟ್‌ ಚಿತ್ರ.

ಈಗ ಅವರು “ಉದ್ಘರ್ಷ’ ಚಿತ್ರವನ್ನು ಸಂಪೂರ್ಣ ಮುಗಿಸಿ, ಪ್ರೇಕ್ಷಕರ ಮುಂದೆ ತರಲು ಅಣಿಯಾಗುತ್ತಿದ್ದಾರೆ. ಒಂದು ದಿನ ಇದ್ದಕ್ಕಿದ್ದಂತೆಯೇ ಹರ್ಷಿಕಾ ಪೂಣಚ್ಚ ಅವರಿಗೆ ಸುನೀಲ್‌ ಕುಮಾರ್‌ ದೇಸಾಯಿ ಅವರು ಫೋನ್‌ ಮಾಡಿ, ನಾಳೆಯಿಂದ ಚಿತ್ರೀಕರಣವಿದೆ. ಬಂದು ಬಿಡಮ್ಮಾ ಅಂದಿದ್ದಾರೆ.

ನನ್ನ ಪಾತ್ರಕ್ಕೆ ನೀನು ಸರಿ ಹೊಂದುತ್ತೀಯ ಅಂದಾಗ, ಹರ್ಷಿಕಾ ಕಥೆಯ ಒನ್‌ಲೈನ್‌ ಕೇಳಿದ್ದೇ ತಡ, ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಸುಮಾರು ಹತ್ತು ದಿನಗಳವರೆಗೆ ಹರ್ಷಿಕಾ ತನ್ನ ಭಾಗದ ಪಾತ್ರ ನಿರ್ವಹಿಸಿ ಬಂದಿದ್ದಾರೆ. ಹರ್ಷಿಕಾ ಅವರಿಲ್ಲಿ, ತುಂಬಾನೇ ಬೋಲ್ಡ್‌ ಆಗಿರುವಂತಹ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ.

ಅಂದಹಾಗೆ, ಈ ಚಿತ್ರಕ್ಕೆ ‘ಸಿಂಗಂ 3’ ಖ್ಯಾತಿಯ ಅನೂಪ್‌ ಠಾಕೂರ್‌ ಸಿಂಗ್‌ ಹೀರೋ ಆಗಿ ನಟಿಸಿದ್ದಾರೆ. ಇನ್ನು, ಕಿಶೋರ್‌ ಅವರು ಹರ್ಷಿಕಾ ತಂದೆಯಾಗಿ ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು,  ಪುನಃ ದೇಸಾಯಿ ಅವರು ಗೆಲುವಿನ ಸೂತ್ರ ಹಿಡಿದು ಬಂದಿದ್ದಾರೆ. ಕೇರಳ, ಕೊಡಗು, ಬೆಂಗಳೂರು ಸೇರಿದಂತೆ ಇತರೆಡೆ ಚಿತ್ರೀಕರಣಗೊಂಡಿದೆ.

Advertisement

ಚಿತ್ರದಲ್ಲಿ ಕಬೀರ್‌ ದುಹಾನ್‌ ಅವರು ಖಳನಟರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸುನೀಲ್‌ಕುಮಾರ್‌ ದೇಸಾಯಿ ಅವರ ಈ “ಉದ್ಘರ್ಷ’ ಡಿಸೆಂಬರ್‌ ಹೊತ್ತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next