Advertisement

ಕೈ-ಜೆಡಿಎಸ್‌ ಒಂದಾಗಿ ಬಿಜೆಪಿ ಸೋಲಿಸಿ:ಸಿಎಂಗೆ ಪ್ರಗತಿಪರರ ಮನವಿ

03:19 PM Mar 29, 2018 | Team Udayavani |

ಬೆಂಗಳೂರು: ಪ್ರಗತಿಪರ ಸಂಘಟನೆಗಳ ಮುಖಂಡರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು. 

Advertisement

ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಹೀಗಾಗಿ ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬೇಕು ಎಂದು ಪ್ರಗತಿಪರರು ಮನವಿ ಮಾಡಿರುವುದಾಗಿ ವರದಿಯಾಗಿದೆ. 

ಪ್ರಗತಿಪರರ ನಿಯೋಗದಲ್ಲಿ ಇಂದುಧರ ಹೊನ್ನಾಪುರ,ಹಿರಿಯ ಚಿಂತಕ ಎ ಕೆ ಸುಬ್ಬಯ್ಯ ,ಕೋಮು ಸೌಹಾರ್ದ ವೇದಿಕೆಯ ಕೆ.ಎಲ್‌.ಅಶೋಕ್‌ ಮುಂತಾದವರು ಇದ್ದರು. 

ಮೈತ್ರಿ ಇಲ್ಲ 

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ  ದಿನೇಶ್‌ ಗುಂಡುರಾವ್‌ ‘ರಾಜ್ಯದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಪ್ರಶ್ನೆ ಇಲ್ಲ. ಕಾಂಗ್ರೆಸ್‌ ಸಶಕ್ತವಾಗಿದ್ದು 224 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಮೈತ್ರಿ ಮಾಡಿಕೊಳ್ಳಲು ಪ್ರಗತಿಪರರು ಹೇಳಿಲ್ಲ, ಒಟ್ಟಾಗಿ ಹೋಗಲು ಹೇಳಿದ್ದಾರಷ್ಟೇ’ ಎಂದರು.

Advertisement

ಸಚಿವ ಕೆ.ಜೆ.ಜಾರ್ಜ್‌ ಅವರೂ ಮೈತ್ರಿ ಮಾತನ್ನು ತಳ್ಳಿ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next